ಅಮಲು ಪದಾರ್ಥ ಸೇವಿಸಿದ ಯುವಕನ ಬಂಧನ

Update: 2017-03-29 15:20 GMT

ಮಂಗಳೂರು, ಮಾ.29: ಗಾಂಜಾ ಸೇವನೆ ಮಾಡಿದ ಯುವಕನೋರ್ವನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕಸಬ ಬೆಂಗ್ರೆಯ ನಿವಾಸಿ ಅಝರ್ ಯಾನೆ ಅಜ್ಜು (22) ಎಂದು ಗುರುತಿಸಲಾಗಿದೆ.ತಣ್ಣೀರುಬಾವಿ ಬೀಚ್ ಬಳಿ ಗಾಂಜಾ ಸೇವನೆ ಮಾಡಿ ಯುಕನೋರ್ವ ಕುಳಿತುಕೊಂಡಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಣಂಬೂರು ಠಾಣಾ ಅಪರಾಧ ಪತ್ತೆ ವಿಭಾಗದ ಉಪನಿರೀಕ್ಷಕ ಕುಮಾರೇಶನ್ ಅವರು ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬೀಚ್‌ನಲ್ಲಿ ಕುಳಿತ್ತಿದ್ದ ಯುವಕನನ್ನು ವಿಚಾರಿಸಲಾಗಿ ಆತ ಮೊದಲು ತನ್ನ ಹೆಸರು ಅಜಿತ್ ಎಂದು ಹೇಳಿದ್ದು, ಮತ್ತೆ ವಿಚಾರಿಸಿದಾಗ ಅಝರ್ ಯಾನೆ ಅಜ್ಜು ಎಂದು ಹೇಳಿದ್ದಾನೆ.

ಗಾಂಜಾ ಸೇವನೆ ಮಾಡಿರುವ ಬಗ್ಗೆ ಕೇಳಿದಾಗ ಆರೋಪಿ ಒಪ್ಪಿಕೊಂಡಿದ್ದು, ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಅಮಲು ಪದಾರ್ಥ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News