ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ್ಯು

Update: 2017-03-30 17:57 GMT

ಕೋಟ, ಮಾ.30: ಹಳೆಯ ಬಾವಿಯ ರಿಪೇರಿ ಕೆಲಸ ಮಾಡುತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟ ಘಟನೆ ಬುಧವಾರ ಅಪರಾಹ್ನದ ವೇಳೆ ತೆಕ್ಕಟ್ಟೆ ಗ್ರಾಮದ ಕೊಮೆ ಎಂಬಲ್ಲಿ ನಡೆದಿದೆ.

ಮೃತರನ್ನು ವಿಠಲವಾಡಿಯ ಭಾಸ್ಕರ (33) ಎಂದು ಗುರುತಿಸಲಾಗಿದೆ. ಅವರು ತೆಕ್ಕಟ್ಟೆ ಗ್ರಾಮದ ಕೊಮೆಯಲ್ಲಿರುವ ಬಾಬು ಪೂಜಾರಿ ಎಂಬವರಿಗೆ ಸೇರಿದ ಕೃಷಿಯ ನೀರಾವರಿಗೆ ಬಳಸುವ ಹಳೆ ಬಾವಿಯ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದು, ಕೆಲಸ ಮಾಡುವ ವೇಳೆ ಅಪರಾಹ್ನ 12:15ರ ಸುಮಾರಿಗೆ ಕಾಲು ಜಾರಿ ತಲೆ ಕೆಳಗಾಗಿ ಬಾವಿಯೊಳಗೆ ಬಿದ್ದಿದ್ದು, ಅವರ ಜೊತೆ ಕೆಲಸ ಮಾಡುವವರು ತಕ್ಷಣ ಮೇಲಕ್ಕೆತ್ತಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಅವರಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News