ಎಳೆಯ ಇಂಜಿನಿಯರ್ ಪ್ರತಿಭೆಗಳ ಅನುಭವ ಕಥನ 'ಶೇಫ್ ಇಟ್' ಕೃತಿ ಬಿಡುಗಡೆ
ಮಂಗಳೂರು.ಎ,1:ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಆಗುತ್ತಿರುವ ವ್ಯಾಪಕ ಬದಲಾವಣೆಯ ಹಿನ್ನೆಲೆಯಲ್ಲಿ ಗೆಲುವು ಸಾಧಿಸಲು ನಿರಂತರ ಕಲಿಕೆಯ ಪ್ರಕ್ರೀಯೆ ನಡೆಯುತ್ತಿರಬೇಕು ಎಂದು ಪ್ಯೂಚರ್ ಫೋಕಸ್ ಇನ್ಫೊಟೆಕ್ ಪ್ರೈವೇಟ್ ಲಿಮಿಟೆಡ್ನ ಚೆನ್ನೈ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಎಂ.ವಿ.ಸುಬ್ರ ಮಣಿಯನ್ ತಿಳಿಸಿದ್ದಾರೆ.
ಖ್ಯಾತ ಇಂಜಿನಿಯರ್ ಐಬಿಎಂ ಸಂಸ್ಥೆಯ ಅಧಿಕಾರಿ ಡಾ.ಸುಬ್ರಮಣಿ ರಾಮಕೃಷ್ಣನ್ ಮತ್ತು ವೈಜಯಂತಿ ಶ್ರೀನಿವಾಸ ರಾಘವನ್ ರವರು ರಚಿಸಿರುವ 'ಶೇಫ್ ಇಟ್ ' ಕೃತಿಯನ್ನು ಶನಿವಾರ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಲಿಕೆಯ ಜೊತೆ ಮರುಚಿಂತನೆ,ಸರಿಯಾಗಿ ಗಮನಿಸುವುದು,ಸವಾಲುಗಳು ಎದುರಾದಾಗ ಸೂಕ್ತ ಪರಿಹಾರ ಮಾರ್ಗ ಕಂಡು ಕೊಳ್ಳುವುದು ಮುಖ್ಯ.ಈ ನಿಟ್ಟಿನಲ್ಲಿ ಯಶಸ್ಸಿನ ಹಿಂದೆ ಹೋಗಬೇಡಿ, ಯಶಸ್ಸು ನಿಮ್ಮ ಹಿಂದೆ ಬರುವಂತೆ ಆಗಬೇಕು.ಕಲಿಕೆಗೆ ಕೊನೆ ಎಂಬುವುದಿಲ್ಲ ಇಂಜಿನಿಯರಿಂಗ್ ಓದುವುದು ಬೇರೆ,ಇಂಜಿನಿಯರಿಂಗ್ ಕಲಿಕೆ ನಡುವೆ ವ್ಯತ್ಯಾಸವಿದೆ ಎಂದು ಎಂ.ವಿ.ಸುಬ್ರ ಮಣಿಯನ್ ತಿಳಿಸಿದ್ದಾರೆ.
ಶೇಫ್ ಇಟ್ ಪುಸ್ತಕದಲ್ಲಿ 50ಯುವ ಇಂಜಿನಿಯರಿಂಗ್ ಪ್ರತಿಭೆಗಳ ಸಾಧನೆಯ ಕಥನಗಳಿವೆ.ಈ ಪೈಕಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ 13 ಸಾಧನೆಯ ಕಥನಗಳಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಗಳು ಐಐಟಿ,ಎನ್ಐಟಿ ಯಂತಹ ಸಂಸ್ಥೆಗಳ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.ಇದರಿಂದ ಅವರಿಗೆ ಇನ್ನಷ್ಟು ಅನುಭವ ಪಡೆಯಲು ಸಾಧ್ಯವಾಗುತ್ತದೆ.ಇನ್ನಷ್ಟು ಸ್ಪೂರ್ತಿ ಪಡೆಯಬಹುದು ಇಂಜಿನಿಯರಿಂಗ್ ವಿಷಯದ ಬಗ್ಗೆ ಆಳವಾದ ಅನುಭವ ಪಡೆದುಕೊಳ್ಳಲು ಸಾಧ್ಯ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಶೇಫ್ ಇಟ್ ಕೃತಿಯನ್ನು ರಚನೆ ಮಾಡಿದ ಡಾ.ಸುಬ್ರಮಣಿ ಮಾತನಾಡುತ್ತಾ ಈ ಕೃತಿ ವಿದ್ಯಾರ್ಥಿಗಳ ಅರಿವನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುವಂತೆ ರಚಿಸಲಾಗಿದೆ ಎಂದು ತಿಳಿಸಿದರು.ಜಗತ್ತಿನ ಹಲವು ಮುಂದುವರಿದ ದೇಶಗಳಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿವೆ.ಭಾರತದಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕ್ರೀಯಾಶೀಲ ಉದ್ಯಮಿಗಳು ಬರಬೇಕಾಗಿದೆ .ಈ ರೀತಿಯ ಸ್ವಯಂ ಸ್ಫೂರ್ತಿ ಪಡೆಯಲು ಶೇಫ್ ಇಟ್ ಕೃತಿ ಪೂರಕವಾಗಿದೆ ಎಂದು ವಿವರಿಸಿದರು .ಕೃತಿಯ ರಚನೆಯ ವಿವಿರಗಳನ್ನು ವೈಜಯಂತಿ ತಿಳಿಸಿದರು.
ಸಮಾರಂಭದಲ್ಲಿ ಯೋಕ್ ಇಂಜಿನಿಯರಿಂಗ್ ಔಟ್ ಸೋರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸುಂದರಾಮ್ ಮೂರ್ತಿ,ಪ್ರಾಂಶುಪಾಲ ಪ್ರಭಾಕರ ಉಪಸ್ಥಿತರಿದ್ದರು.ರಕ್ಷಿತ್ ಶೆಟ್ಟಿ ಸ್ವಾಗತಿಸಿದರು.ಉಪ ಪ್ರಾಂಶುಪಾಲ ಡಾ.ಬಾಲಕೃಷ್ಣ ವಂದಿಸಿದರು.