ಅಸ್ಪಶ್ಯತೆ ನಿವಾರಣೆಗಾಗಿ ದಲಿತರ ಮನೆಯಲ್ಲಿ ಭಜನೆ

Update: 2017-04-01 18:27 GMT

ಉಪ್ಪಿನಂಗಡಿ, ಎ.1: ಹಿಂದೂ ಸಮಾಜದಲ್ಲಿರುವ ಅಸ್ಪಶ್ಯತೆಯನ್ನು ಹೋಗಲಾಡಿಸುವ ಹಿನ್ನೆಲೆಯಲ್ಲಿ ದಲಿತರ ಮನೆಯಂಗಳದಲ್ಲಿ ಭಜನಾ ಕಾರ್ಯಕ್ರಮ ನಡೆಸಲು ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಮುಂದಾದೆ. ಇದರ ಎರಡನೆ ಭಜನಾ ಕಾರ್ಯಕ್ರಮವು ಶುಕ್ರವಾರ ರಾತ್ರಿ ಅಲಗುರಿಮಜಲಿನ ತನಿಯಪ್ಪ ಎಂಬವರ ಮನೆಯಲ್ಲಿ ಜರಗಿತು.

ಈ ವೇಳೆ ಖ್ಯಾತ ನ್ಯಾಯವಾದಿ ಮಹೇಶ್‌ಕಜೆ, ರಾಮನಗರದ ವನಿತಾ ಸಮಾಜದ ಅಧ್ಯಕ್ಷೆ ಉಷಾ ಮುಳಿಯ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಸುಧಾಕರ್ ಶೆಟ್ಟಿ ಗಾಂಧಿಪಾರ್ಕ್, ನಟ್ಟಿಬೈಲ್‌ನ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಯು.ಜಿ.ರಾಧಾ ಮಾತನಾಡಿದರು.

ಸುಂದರ ಆದರ್ಶನಗರ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಮಾಧವ ಶಿಶು ಮಂದಿರದ ಕಾರ್ಯದರ್ಶಿ ಉದಯ ಕುಮಾರ್ ಯು.ಎಲ್.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News