ಉದ್ಯಾವರ: ಆಂಡ್ ನೇರ್ಚೆ ಸಮಾರೋಪ

Update: 2017-04-01 18:41 GMT

ಮಂಜೇಶ್ವರ, ಎ.1: ಉದ್ಯಾವರ ಅಸ್ಸೈಯದ್ ಶಹೀದ್ ವಲಿಯುಲ್ಲಾಹಿ ಮಖಾಂ ಶರೀಫ್ ಆಂಡ್ ನೇರ್ಚೆ ಎ.2ರಂದು ರಾತ್ರಿ ಸಮಾರೋಪಗೊಳ್ಳಲಿದೆ. ರಾತ್ರಿ 8:30ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಸೈಯದ್ ಅತಾವುಲ್ಲಾ ತಂಙಳ್ ಉದ್ಘಾಟಿಸುವರು.

ದರ್ಗಾ ಸಮಿತಿಯ ಅಧ್ಯಕ್ಷ ಎ.ಕೆ. ಮೋನು ಹಾಜಿ ಅಧ್ಯಕ್ಷತೆ ವಹಿಸುವರು. ಎ.ಎಂ ನೌಶಾದ್ ಬಾಖವಿ ತಿರುವನಂತಪುರಂ ಮುಖ್ಯ ಭಾಷಣ ಮಾಡುವರು. ಅಸ್ಸೈಯದ್ ಸಹೀರ್ ತಂಙಳ್ ದರ್ಗಾ ಝಿಯಾರತ್‌ಗೆ ನೇತೃತ್ವ ನೀಡುವರು. ಜಮಾಅತ್ ಮುದರ್ರಿಸ್ ಅಬ್ದುಲ್ ಖಾದರ್ ಮುಸ್ಲಿಯಾರ್ , ಜಮಾಅತ್ ಖತೀಬ್ ಅಬ್ದುಲ್ ಸಲಾಂ ಮದನಿ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News