ನಾಳೆ ಸಚಿವ ಡಿವಿ ಮಂಗಳೂರಿಗೆ

Update: 2017-04-07 18:13 GMT

ಮಂಗಳೂರು, ಎ.7: ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಎ.9ರಂದು ಬೆಳಗ್ಗೆ 7:20ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 10:45ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಮಂಗಳೂರು-ಬೆಂಗಳೂರು ನೂತನ ರೈಲಿಗೆ ಚಾಲನೆ ನೀಡಲಿದ್ದು, ಮಂಗಳೂರು -ಚೆರ್ವತ್ತೂರು ವಿದ್ಯುದ್ದೀಕರಣ ಹಾಗೂ ಪಣಂಬೂರು - ಜೋಕಟ್ಟೆ ನೂತನ ಡಬ್ಲಿಂಗ್ ಹಳಿ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಎ.10ರಂದು ಬೆಳಗ್ಗೆ 7:20ಕ್ಕೆ ಹೊಸದಿಲ್ಲಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News