ಎಪ್ರಿಲ್ 29ರಂದು ಅಕ್ಕರಂಗಡಿ ಉರೂಸ್
ವಿಟ್ಲ, ಎ.8: ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ವತಿಯಿಂದ ಉರೂಸ್ ಮುಬಾರಕ್ ಹಾಗೂ ನಾಲ್ಕು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಎ.26ರಿಂದ 29ರವರೆಗೆ ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಉಪಾಧ್ಯಕ್ಷ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ದುವಾಶಿರ್ವಚನಗೈಯಲಿದ್ದು, ಮಸೀದಿ ಮುದರ್ರಿಸ್ ಇಸ್ಮಾಯೀಲ್ ದಾರಿಮಿ ಉದ್ಘಾಟಿಸುವರು. ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಞಿ ಅಧ್ಯಕ್ಷತೆ ವಹಿಸುವರು. ಅಬೂ ಝಿಹಾನ್ ಝುಬೈರ್ ಅಝ್ಹರಿ ಪಳ್ಳಗೋಡು-ಕೇರಳ, ಸಫೀರಲಿ ಚಾಲಿಯಂ ಕ್ಯಾಲಿಕಟ್, ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು, ಅಶ್ಫಾಕ್ ಫೈಝಿ ಸಜಿಪನಡು ಧಾರ್ಮಿಕ ಪ್ರವಚನಗೈಯುವರು.
ಎ.29ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಮೂಡಿಗೆರೆ ಖಾಝಿ ಶೈಖುನಾ ಎಂ.ಎ.ಖಾಸಿಂ ಮುಸ್ಲಿಯಾರ್ ದುವಾಶಿರ್ವಚನಗೈಯುವರು. ಸೈಯದ್ ಕೆ.ಎಸ್.ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಉದ್ಯಮಿಗಳಾದ ನೌಶಾದ್ ಹಾಜಿ ಸೂರಲ್ಪಾಡಿ, ಹಾಜಿ ಜಿ.ಸುಲೈಮಾನ್, ಹಾಜಿ ಹಫೀಝ್, ಪಿ.ಎಂ.ಅಹ್ಮದ್ ಹಾಜಿ ನೆಹರುನಗರ, ಮಸೀದಿಯ ಉಪಾಧ್ಯಕ್ಷ ಎಂ.ಎ.ಬಶೀರುದ್ದೀನ್ ಅನ್ವರ್, ಮಾಜಿ ಅಧ್ಯಕ್ಷ ಪಿ.ಜೆ.ಯೂಸುಫ್ ಹಾಜಿ ಮೊದಲಾದವರು ಉಪಸ್ಥಿತರಿರುವರು ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಪಿ.ಜೆ.ಅಬ್ದುಲ್ ರಹಿಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.