ಉಪ್ಪಿನಂಗಡಿಯಲ್ಲಿ ತಂದೆಯ ಅಸ್ಥಿ ವಿಸರ್ಜನೆ ಮಾಡಿದ ಐಶ್ವರ್ಯಾ ರೈ

Update: 2017-04-08 10:53 GMT

ಉಪ್ಪಿನಂಗಡಿ, ಎ.8: ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಗೆ ಶನಿವಾರ ಖ್ಯಾತ ಬಹುಭಾಷಾ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಭೇಟಿ ನೀಡಿದರು.

ಕುಟುಂಬ ಸಮೇತರಾಗಿ ಆಗಮಿಸಿದ ಅವರು ಇತ್ತೀಚೆಗೆ ನಿಧನರಾದ ಅವರ ತಂದೆ ದಿ.ಕೃಷ್ಣರಾಜ್ ರೈಯವರ ಅಸ್ಥಿಯನ್ನು ಮೋಕ್ಷ ಧಾಮವೆನಿಸಿದ ಶ್ರೀ ಕ್ಷೇತ್ರದ ನೇತ್ರಾವತಿ- ಕುಮಾರಧಾರ ನದಿಯಲ್ಲಿ ವಿಸರ್ಜನೆ ಮಾಡಿದರು. ಐಶ್ವರ್ಯಾ ರೈಯವರ ಸಹೋದರ ಆದಿತ್ಯ ರೈ ವಿಧಿವಿಧಾನ ಕಾರ್ಯಗಳನ್ನು ನೆರವೇರಿಸಿದರು.

ಅರ್ಚಕ ಶ್ರೀಕಾಂತ್ ಭಟ್ ಧಾರ್ಮಿಕ ವಿಧಿವಿಧಾನ ಕ್ರಿಯೆಯನ್ನು ನಡೆಸಿದರು. ಬಳಿಕ ಶ್ರೀ ಸಹಸ್ರಲಿಂಗೇಶ್ವರನ ದರ್ಶನ ಪಡೆದರು. ಈ ಸಂದರ್ಭ ಐಶ್ವರ್ಯಾ ರೈಯವರ ತಾಯಿ ವೃಂದಾ ರೈ, ಪುತ್ರಿ ಆರಾಧ್ಯಾ ಬಚ್ಚನ್, ತಾಯಿ ವೃಂದಾ ರೈ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

*ಎರಡನೆ ಬಾರಿ ಭೇಟಿ: ಕಳೆದ ಸುಮಾರು 10 ವರ್ಷಗಳ ಹಿಂದೆ ಐಶ್ವರ್ಯಾ ರೈಯವರು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಗೆ ಭೇಟಿ ನೀಡಿದ್ದರು. ಆ ಸಂದರ್ಭ ತನ್ನ ಚಿಕ್ಕಪ್ಪನ ಉತ್ತರ ಕ್ರಿಯೆ ಕಾರ್ಯಕ್ರಮಕ್ಕಾಗಿ ಅವರು ಆಗಮಿಸಿದ್ದರು. ಆಗ ಐಶ್ವರ್ಯಾ ರೈಯವರು ಅವಿವಾಹಿತರಾಗಿದ್ದರು. ಈಗ ಎರಡನೆ ಬಾರಿ ಮಗಳೊಂದಿಗೆ ಉಪ್ಪಿನಂಗಡಿಗೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News