ಉಡುಪಿ: ಸಾರ್ವಜನಿಕರಿಗೆ ಮರಳು ಲಭ್ಯ

Update: 2017-04-08 18:28 GMT

ಉಡುಪಿ, ಎ.8: ಜಿಲ್ಲೆಯ ನಾನಾ ಕಡೆಗಳಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಮರಳನ್ನು ಕುಂದಾಪುರದ ಗಾಂಧಿಮೈದಾನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಶೇಖರಿಸಲಾಗಿದ್ದು, ಇಲ್ಲಿ 28 ಲೋಡ್‌ಗಳಷ್ಟು ಮರಳು ಸಂಗ್ರಹವಾಗಿದೆ.

ಮರಳಿನ ಅಗತ್ಯವಿರುವ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಲೋಕೋಪಯೋಗಿ ಇಲಾಖೆಯನ್ನು ಕಚೇರಿ ವೇಳೆಯಲ್ಲಿ (08254-230363)ಸಂಪರ್ಕಿಸಬಹುದು. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ಎಸ್‌ಆರ್ ದರವನ್ನು ಪಾವತಿಸಿ ಮರಳನ್ನು ಪಡೆದುಕೊಳ್ಳಬಹುದು ಎಂದು ಕುಂದಾಪುರದ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News