ಮಾನವ ಹಕ್ಕುಗಳ ಕುರಿತು ಸಂವಾದ

Update: 2017-04-09 18:25 GMT

ಉಡುಪಿ, ಎ.9: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಮತ್ತು ಎಫ್‌ಎಸ್‌ಎಲ್ ಇಂಡಿಯಾ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಮಾನವ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

 ಸಂಪನ್ಮೂಲ ವ್ಯಕ್ತಿಯಾಗಿ ಎಫ್‌ಎಸ್‌ಎಲ್ ಇಂಡಿಯಾ ಕುಂದಾಪುರದ ಸಂಯೋಜಕಿ ಸ್ಪೇನ್ ಮೂಲದ ಮಾರ್ತ ಕ್ಯಾಸ್ಟಲಿನೋಸ್ ಗೊಂಝಾ ಲಿಝ್ ಭಾಗವಹಿಸಿದ್ದರು. ಜರ್ಮನಿಯ ಸ್ವಯಂ ಸೇವಕರಾದ ಫೆಲಿಕ್ಸ್, ಆಡ್ರಿಯನ್, ಡೇನಿಯಲ್, ಮಿರಿಯಂ, ಸೋಫಿಯ, ಎವ್ರಿಮ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೋ ವಹಿಸಿದ್ದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕ ರಾಯನ್ ಮಥಾಯಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News