ದೇರಳಕಟ್ಟೆ: ಫಾ.ಮುಲ್ಲರ್ ಕಾಲೇಜಿನಲ್ಲಿ ವಿಶ್ವ ಹೋಮಿಯೋಪಥಿ ದಿನಾಚರಣೆ

Update: 2017-04-10 18:34 GMT

  ಮಂಗಳೂರು, ಎ.10: ದೇರಳ ಕಟ್ಟೆಯ ಫಾ.ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆ ಮತ್ತು ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಹೋಮಿಯೋಪಥಿ ದಿನವನ್ನು ಇಂದು ಆಚರಿಸಲಾಯಿತು.

ದ.ಕ. ಜಿಪಂ ಸಿಇಒ ಡಾ.ಎಂ.ಆರ್.ರವಿ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಎಫ್‌ಎಂಸಿಐನ ಪ್ರಭಾರ ನಿರ್ದೇಶಕ ವಂ.ರಿಚಾರ್ಡ್ ಕುವೆಲ್ಲೋ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲ ಡಾ.ಶಿವಪ್ರಸಾದ್ ಸ್ವಾಗತಿಸಿದರು.

ಕಾಲೇಜಿನ ಹಳೆವಿದ್ಯಾರ್ಥಿ ಮತ್ತು ಮಧುರೈ ಎಸ್.ಎಸ್.ಹಾನ್ಸ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎಂ.ಎಸ್.ಕಾರ್ತಿಕೇಯನ್ ಅತಿಥಿಯಾಗಿ ಭಾಗವಹಿಸಿದ್ದರು.

ವೈದ್ಯಕೀಯ ಕಾಲೇಜಿನಲ್ಲಿ ಉತ್ತಮ ಸಾಧನೆ ಮಾಡಿದ ಆಯೆಶಾ ರವೂಫ್ ಅವರಿಗೆ 45 ಸಾವಿರ ರೂ., ಕೀರ್ತನಾ ಕೆ. 15 ಸಾವಿರ ಹಾಗೂ ಯೆಂಡುರೈ ಅನುಷಾರಿಗೆ 10 ಸಾವಿರ ರೂ. ನಗದು ಬಹುಮಾನವನ್ನು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಡೇನಿಯಲ್ ರಾಜ್ ಮತ್ತು ಡಾ.ಬಾತ್ರಾ ಪ್ರಕಟಿಸಿದರು.

ಡಾ.ರೀಟಾ ಚಕ್ರವರ್ತಿ ವಂದಿಸಿದರು. ಡಾ.ಯಶಸ್ವಿನಿ ಮತ್ತು ಶೃತಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News