ಸುರತ್ಕಲ್: ವ್ಯಕ್ತಿತ್ವ ವಿಕಸನ ಶಿಬಿರ
ಮಂಗಳೂರು, ಎ.12: ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ವತಿಯಿಂದ ವ್ಯಕ್ತಿತ್ವ ವಿಕಸನ ಶಿಬಿರವು ಬುಧವಾರ ಸುರತ್ಕಲ್ ಬಂಟರ ಭವನದಲ್ಲಿ ಜರಗಿತು.
ವೇದಿಕೆಯ ಮಾಜಿ ಅಧ್ಯಕ್ಷೆ ಪುಷ್ಪಾ ಬಿ.ಶೇಣವ ಕಾರ್ಯಾಗಾರ ಉದ್ಘಾಟಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ,ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ಮಮತಾ ಶೆಟ್ಟಿ ಉಪಸ್ಥಿತರಿದ್ದರು. ‘ಬದುಕು ಇಷ್ಟೇ ಅಲ್ಲ’ ಎಂಬ ವಿಷಯದ ಕುರಿತು ಹಿಲ್ಡಾ ರಾಯಪ್ಪನ್ ವಿಚಾರ ಮಂಡಿಸಿದರು.
'ಚೆಲುವಿಗೊಂದು ಚಿತ್ತಾರ' ಬಗ್ಗೆ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಪ್ರಾಂಶುಪಾಲೆ ಕಸ್ತೂರಿ ಜೆ. ಶೆಟ್ಟಿ ಮಾತನಾಡಿದರು. 'ಪೇಟಿಎಂ 'ವಿಚಾರಕ್ಕೆ ಸಂಬಂಧಿಸಿ ಕರ್ಣಾಟಕ ಬ್ಯಾಂಕ್ನ ಪ್ರಬಂಧಕ ಸುಕುಮಾರ್ ಮಾಹಿತಿ ನೀಡಿದರು.
ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ವೀಣಾ ಶೆಟ್ಟಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ ವಂದಿಸಿದರು ಕಾರ್ಯದರ್ಶಿ ವಿಜಯಾ ಭಾರತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.