ಗುಡ್‌ಫ್ರೈಡೇ ಪ್ರಯುಕ್ತ ಬಿಷಪ್‌ರಿಂದ ವೆನ್ಲಾಕ್ ಆಸ್ಪತ್ರೆಗೆ ಭೇಟಿ

Update: 2017-04-14 11:04 GMT

ಮಂಗಳೂರು, ಎ.14: ಸಂತ ಕ್ರಿಸ್ಟೋಫರ್ ಅಸೇಸಿಯೇಶನ್ ಮಂಗಳೂರು ಇದರ 50ನೆ ವಾರ್ಷಿಕ ಆಚರಣೆಯ ಪ್ರಯುಕ್ತ ವೆನ್ಲಾಕ್ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡಿಗೆ ಗುಡ್‌ಫ್ರೈಡೇ ದಿನವಾದ ಇಂದು ಎರಡು ಗಾಲಿ ಕುರ್ಚಿಗಳನ್ನು ದಾನವಾಗಿ ನೀಡಲಾಯಿತು.

ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಅಲೋಷಿಯಸ್ ಪಾವ್ಲ್ ಡಿಸೋಜ ಮಾತನಾಡಿ, ಇಂದು ಯೇಸು ಕ್ರಿಸ್ತರು ಮರಣ ಹೊಂದಿದ ದಿನವಾಗಿದ್ದು, ವಿಶೇಷ ಪ್ರಾರ್ಥನೆ, ಉಪವಾಸದಿಂದ ಭಕ್ತಿಯಿಂದ ಆಚರಿಸುವ ದಿನ. ಸಮಾಜ ಸೇವೆಯ ಮೂಲಕ ಗುಡ್ ಫ್ರೈಡೇ ಆಚರಿಸಿದ ಸಂತ ಕ್ರಿಸ್ಟೋಫರ್ ಅಸೇಸಿಯೇಶನ್ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭ ಸಂಸ್ಥೆಯ ಗೌರವ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ಸುಶೀಲ್ ನೊರೊನ್ಹ, ಆಸ್ಪತ್ರೆಯ ಜಿಲ್ಲಾ ಅಧೀಕಕ್ಷಿ ಡಾ.ರಾಜೇಶ್ವೇರಿ, ಉಪ ಅಧೀಕ್ಷಕಿ ಡಾ.ಜೂಲಿಯನ್, ಮಕ್ಕಳ ವಾರ್ಡಿನ ಮೇಲ್ವಿಚಾರಕ ಡಾ.ಬಾಲಕೃಷ್ಣ, ಸಂಸ್ಥೆಯ ಉಪಧ್ಯಾಕ್ಷ ಫ್ರಾನ್ಸಿಸ್ ಡಿಸೋಜ, ಡೆನಿಸ್ ಲೋಬೋ, ಗ್ರೆಗೋರಿ ವೇಗಸ್, ಸುನೀಲ್ ವಾಸ್, ಜೆರಾಲ್ಡ್ ಟವರ್ಸ್‌, ಸೆಬಾಸ್ಟಿಯನ್ ಡಿಕ್ರುಜ್ ಪೀಟರ್ ಗೋನ್ಸಾಲ್ವಿಸ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News