ಎ. 17 : ಬೋಂದೆಲ್ನಲ್ಲಿ ಸಲಫಿ ಸಮಾವೇಶ
Update: 2017-04-15 18:49 IST
ಮಂಗಳೂರು,ಎ.15: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಹಮ್ಮಿಕೊಂಡಿರುವ ಕುರ್ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಮ್.ನ ಕುಂಜತ್ತಬೈಲ್ ಘಟಕದ ವತಿಯಿಂದ ಎ. 17 ರಂದು ಸಂಜೆ 4:30ಕ್ಕೆ ಕಾವೂರ್ ಸಮೀಪದ ಬೋಂದೆಲ್ ಜಂಕ್ಷನ್ನಲ್ಲಿ ಸಲಫಿ ಸಮಾವೇಶವು ಜರಗಲಿದೆ.
ಈ ಸಮಾವೇಶದಲ್ಲಿ ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲಾ ಮುಸ್ಲಿಯಾರ್ ಮತ್ತು ಇಬ್ರಾಹಿಂ ಸೌಶಾದ್ ಫರಂಗಿಪೇಟೆ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಎಸ್.ಕೆ.ಎಸ್.ಎಮ್.ನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್. ಅಬ್ದುಲ್ ರಝಾಕ್ರವರು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆಂದು ಘಟಕದ ಅಧ್ಯಕ್ಷ ಮೌಲವಿ ಶರೀಫ್ ಕುಂಜತ್ತಬೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.