×
Ad

ಕೆಎಸ್ಸಾರ್ಟಿಸಿ ಬಸ್ಸಿನಡಿಗೆ ಬಿದ್ದು ತಾಯಿ-ಮಗು ಮೃತ್ಯು

Update: 2017-04-16 18:21 IST

ಕಾಸರಗೋಡು, ಎ.16: ಕೆಎಸ್ಸಾರ್ಟಿಸಿ ಬಸ್ಸಿನಡಿಗೆ ಬಿದ್ದು ತಾಯಿ ಮತ್ತು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ರವಿವಾರ ಪೆರ್ಲಡ್ಕದಲ್ಲಿ ನಡೆದಿದೆ. ಮೃತಪಟ್ಟವರನ್ನು ಕಾನತ್ತೂರಿನ ರಜನಿ (30) ಹಾಗೂ ಪುತ್ರ ಋತುವೇದ ಎಂದು ಗುರುತಿಸಲಾಗಿದೆ.

ಕಲ್ಲಳ್ಳಿಯಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತುತ್ತಿದ್ದಾಗ ಬಸ್ ಒಮ್ಮೆಲೇ ಮುಂದಕ್ಕೆ ಚಲಿಸಿದ್ದು , ಈ ಸಂದರ್ಭದಲ್ಲಿ ಬಸ್ ನ ಹಿಂಬದಿ ಟಯರ್ ನಡಿ ತಾಯಿ ಮತ್ತು ಮಗು ಸಿಲುಕಿದ್ದಾರೆ. ಇದನ್ನು ಗಮನಿಸಿದ ಇತರ ಪ್ರಯಾಣಿಕರು ಬೊಬ್ಬೆ ಹಾಕಿದಾರೂ ಚಾಲಕ ಬಸ್ ಮುಂದಕ್ಕೆ ಚಲಾಯಿಸಿದ್ದರಿಂದ ಚಕ್ರದಡಿ ಸಿಲುಕಿದ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ. ಇವರ ಜೊತೆಗಿದ್ದ ರಜನಿಯ ತಾಯಿ ರೋಹಿಣಿ ಮತ್ತು ಪುತ್ರಿ ಅತಿಕಾ (3)  ಗಾಯಗೊಂಡಿದ್ದು, ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಜನಿಯು ಪೆರ್ಲಡ್ಕದಲ್ಲಿರುವ ಸಂಬಂಧಿಕರ ಮನೆಗೆ ತೆರಳಿ  ಇಬ್ಬರು ಮಕ್ಕಳು ಮತ್ತು ತಾಯಿ ಜೊತೆ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆನ್ನಲಾಗಿದೆ. 

ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News