ಖುರೇಷಿಯ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಿದವರು ಯಾರೆಂದು ಗೊತ್ತಿಲ್ಲ: ಕಮಿಷನರ್
Update: 2017-04-16 13:05 GMT
ಮಂಗಳೂರು, ಎ.16: ಪೊಲೀಸ್ ದೌರ್ಜನ್ಯಕ್ಕೀಡಾದ ಅಹ್ಮದ್ ಖುರೇಷಿಯ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಯಾರು ಭರಿಸಿದ್ದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗುತ್ತಿಲ್ಲ.
ರವಿವಾರ ಪತ್ರಕತ್ರರ ಪ್ರಶ್ನೆಗೆ ಉತ್ತರಿಸಿದ ಕಮಿಷನರ್ ಚಂದ್ರಶೇಖರ್, "ಖುರೇಷಿಯ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಿದವರು ಯಾರೆಂದು ನನಗೆ ಗೊತ್ತಿಲ್ಲ. ಖುರೇಷಿ ಪ್ರಕರಣವೀಗ ಆಸ್ಪತ್ರೆ, ಜೈಲು, ನ್ಯಾಯಾಲಯದ ನಡುವೆ ನಡೆಯುತ್ತಿದೆ. ನಮ್ಮದೇನಿದ್ದರೂ ‘ಕೋರಿಯರ್’ ಥರದ ಕೆಲಸ" ಎಂದರು.
"ಖುರೇಷಿಯ ಆರೋಗ್ಯ ಇದೀಗ ಚೆನ್ನಾಗಿವೆ. ನಾವಿದನ್ನು ವೈದ್ಯರಿಂದ ಖಚಿತಪಡಿಸಿಕೊಂಡಿದ್ದೇವೆ" ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಮಿಷನರ್ ಚಂದ್ರಶೇಖರ್, "ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಖುರೇಷಿಯ ಆರೋಗ್ಯದ ಸ್ಥಿತಿಯ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.