ಜೆಡಿಎಸ್ ಮುಲ್ಕಿ ಬ್ಲಾಕ್ ಅಧ್ಯಕ್ಷರಾಗಿ ಜೀವನ್ ಶೆಟ್ಟಿ ಆಯ್ಕೆ

Update: 2017-04-18 10:27 GMT

ಮಂಗಳೂರು, ಎ.18: ಜೆಡಿಎಸ್ ಮುಲ್ಕಿ ಬ್ಲಾಕ್ ಅಧ್ಯಕ್ಷರಾಗಿ ಉದ್ಯಮಿ ಎಂ.ಟೆಕ್ ಪಧವೀದರ, ಶಾರದಾ ಗ್ರೂಪ್ ಆಫ್ ಕಂಪೆನಿಯ ಸಿಇಒ ಜೀವನ್ ಕೆ. ಶೆಟ್ಟಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಮುಲ್ಕಿಯ ಖಾಸಗಿ ಹೋಟೆಲ್ ಸಂಭಾಂಗಣದಲ್ಲಿ ಇಕ್ಬಾಲ್ ಅಹ್ಮದ್ ಮುಲ್ಕಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಜೀವನ್ ಅವಿರೋಧವಾಗಿ ಆಯ್ಕೆಯಾದರು.

ಸಲಹೆಗಾರರಾಗಿ ರಿಯಾಝ್ ಕಾರ್ನಾಡ್ ಮತ್ತು ನೂರುಲ್ಲಾ ಶೇಕ್ ಅವರನ್ನು ನೇಮಿಸಲಾಯಿತು.
ಕಾರ್ಯಾಧ್ಯಕ್ಷರಾಗಿ ಜಯ ಮಟ್ಟು, ಉಪಾಧ್ಯಕ್ಷರಾಗಿ ಇಸ್ಮಾಯೀಲ್ ಆದಿಲ್, ಭಾಸ್ಕರ ಶೆಟ್ಟಿಗಾರ, ಪ್ರಸಾದ್ ಅಜಿಲ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಪುತ್ರನ್, ಖಜಾಂಚಿಯಾಗಿ ಬಶೀರ್ ಕೊಳ್ನಾಡ್ ಅವರನ್ನು ಆರಿಸಲಾಯಿತು.

ದ.ಕ. ಜಿಲ್ಲಾ ಕೋರ್ ಕಮಿಟಿಯ ಸದಸ್ಯ ಹರೀಶ್ ಪುತ್ರನ್ ಚುನಾವಣಾಧಿಕಾರಿಯಾಗಿ ಕಾರ್ಯ ನೀರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News