×
Ad

ವಿವೇಕಾನಂದ ಶಾಲಾ ಬೆಳ್ಳಿಹಬ್ಬ: ಆಮಂತ್ರಣ ಪತ್ರ ಬಿಡುಗಡೆ

Update: 2017-04-21 18:08 IST

ಪುತ್ತೂರು,ಎ.21: ಮೇ.28ರಂದು ನಡೆಯಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬ ಮತ್ತು ನೂತನ ಶಾಲಾ ಕಟ್ಟಡದ ಲೋಕಾರ್ಪಣಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಗುರುವಾರ ಶಾಲೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ನಿರ್ದೇಶಕರಾದ ಶಿವಪ್ರಸಾದ್ ಇ, ಜಯಂತಿ ನಾಯಕ್, ಅಚ್ಚುತ ನಾಯಕ್, ಸಂಚಾಲಕ ವಿನೋದ್ ಕುಮಾರ್ ರೈ, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಮುಖ್ಯಗುರು ಆಶಾ ಪುತ್ತೂರಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News