ಎನ್‌ಎಂಪಿಟಿ ಟ್ರಸ್ಟಿಯಾಗಿ ಕುತ್ಯಾರು ನವೀನ್ ಶೆಟ್ಟಿ

Update: 2017-04-21 16:43 GMT

ಉಡುಪಿ, ಎ. 21: ನವ ಮಂಗಳೂರು ಬಂದರು ಮಂಡಳಿಯ ಟ್ರಸ್ಟಿಯಾಗಿ ಮುಂದಿನ 2 ವರ್ಷಗಳ ಅವಧಿಗೆ ಕುತ್ಯಾರು ನವೀನ್ ಶೆಟ್ಟಿ ಅವರನ್ನು ಕೇಂದ್ರ ಭೂಸಾರಿಗೆ ಹೆದ್ದಾರಿ ಬಂದರು ಸಚಿವಾಲಯ ನೇಮಕ ಮಾಡಿ ಆದೇಶಿಸಿದೆ.

ಕುತ್ಯಾರು ನವೀನ್ ಶೆಟ್ಟಿ ಕಳೆದ 22 ವರ್ಷಗಳಿಂದ ಬಿಜೆಪಿಯ ಸಕ್ರಿಯ ಸದಸ್ಯರು. ಕಾಪು ಯುವಮೋರ್ಚಾ ಅಧ್ಯಕ್ಷ, 2 ಅವಧಿಗೆ ಕಾಪು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ಕುತ್ಯಾರು ಗ್ರಾಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ 2ನೇ ಅವಧಿಗೆ ಉಡುಪಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News