ಮುಂದೊಂದು ದಿನ ಭಾರತ ಫಿಸಿಯೋಥೆರಪಿ ರಾಜಧಾನಿಯಾಗಲಿದೆ: ಅನಂತಕುಮಾರ್

Update: 2017-04-22 06:15 GMT

ಮಂಗಳೂರು, ಎ.22: ನಗರದ ವಿಕಾಸ್ ಫಿಸಿಯೋಥೆರಪಿ ಕಾಲೇಜಿನ ನವೀಕೃತ ಪಿಸಿಯೋಥೆರಪಿ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ ಶನಿವಾರ ಬೆಳಗ್ಗೆ ಕಾಲೇಜಿನ ಸಭಾಂಗಣದಲ್ಲಿ ಜರಗಿತು.

ನವೀಕೃತ ಪಿಸಿಯೋಥೆರಪಿ ಲ್ಯಾಬ್ ಅನ್ನು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತಕುಮಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರಸ್ತುತ ವೈದ್ಯರಷ್ಟೇ ಮಹತ್ವ ಫಿಸಿಯೋಥೆರಪಿಸ್ಟ್‌ಗೆ ಇದೆ. ಕ್ರೀಡಾ ಸಾಧಕರ ಯಶಸ್ಸಿನ ಹಿಂದೆ ಫಿಸಿಯೋಥೆರಪಿ ಪಾತ್ರ ಬಹಳಷ್ಟು ಇರುತ್ತದೆ. ಮುಂದೊಂದು ದಿನ ಭಾರತವು ಫಿಸಿಯೋಥೆರಪಿ ರಾಜಧಾನಿಯಾಗಲಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದ ನಳಿನ್ ಕುಮಾರ್ ಕಟೀಲು, ವಿಕಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News