ಕುತ್ತಾರಿನಲ್ಲಿ ಹೊಡೆದಾಟ: ಇಬ್ಬರಿಗೆ ಚೂರಿ ಇರಿತ, ಓರ್ವ ಗಂಭೀರ

Update: 2017-04-22 05:27 GMT

ಕೊಣಾಜೆ, ಎ.22: ಕೊಣಾಜೆ ಠಾಣಾ ವ್ಯಾಪ್ತಿಯ ಕುತ್ತಾರಿನಲ್ಲಿ ಇಂದು ಬೆಳಗ್ಗೆ ನಡೆದ ಹೊಟೇಲ್ ಕಾರ್ಮಿಕರ ನಡುವಿನ ಹೊಡೆದಾಟ ಚೂರಿ ಇರಿತದಲ್ಲಿ ಕೊನೆಗೊಂಡಿದೆ. ಈ ವೇಳೆ ಚೂರಿ ಇರಿತದಿಂದ ಇಬ್ಬರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಬಿಹಾರ ಮೂಲದ ನಿತೇಶ್ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ.

ಕುತ್ತಾರು ಶಾಂತಿ ಬಾಗ್ ಸಮೀಪದ ಹೋಟೆಲ್ ವೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಕಾರ್ಮಿಕರಾಗಿದ್ದ ಉತ್ತರ ಭಾರತ ಮೂಲದ ಮೂವರು ಕಾರ್ಮಿಕರ ನಡುವೆ ಈ ಮಾರಾಮಾರಿ ನಡೆದಿದೆ. ಈ ವೇಳೆ ಒಡಿಶಾ ಮೂಲದ ತಾಹಿರ್ ಎಂಬಾತ ನಿತೇಶ್ ಹಾಗೂ ಪ್ರದೀಪ್ ಅವರ ಮೇಲೆ ಚೂರಿಯಿಂದ ಇರಿದು ಗಾಯಗೊಳಿಸಿರುವುದಾಗಿ ಹೇಳಲಾಗಿದೆ.

ಇರಿತಕ್ಕೊಳಗಾದ ನಿತೇಶ್ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಆರೋಪಿ ತ್ವಾಹಿರ್ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News