ಯುವಕ ನಾಪತ್ತೆ

Update: 2017-04-22 12:14 GMT

ಮೂಡುಬಿದಿರೆ,ಎ.22 : ಮಾಸ್ತಿಕಟ್ಟೆಯ ರಾಜು ಪೂಜಾರಿ ಎಂಬವರ ಪುತ್ರ ನಿವಾಸಿ ಶಶಿಕಾಂತ (27) ಎಂಬವರು ಎ.15ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶಶಿಕಾಂತ್ ಅವರ ಪತ್ನಿ ದೂರು ನೀಡಿದ್ದಾರೆ.

ಚಹರೆ : ಗೋಧಿ ಮೈ ಬಣ್ಣ, ಕೃಶ ಶರೀರದ ಇವರು ಕಾಣೆಯಾದ ದಿನ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಾಫಿ ಬಣ್ಣದ ಟೀ ಶರ್ಟ್ ಧರಿಸಿದ್ದರು. ತುಳು, ಕನ್ನಡ, ಹಿಂದಿಯಲ್ಲಿ ಮಾತಾಡಬಲ್ಲವರಾಗಿದ್ದು, ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದರು.

ಈ ಮೇಲ್ಕಂಡ ಚಹರೆಯುಳ್ಳ ಕಂಡುಬಂದಲ್ಲಿ ಪೊಲೀಸು ಆಯುಕ್ತರು (0824-2220801, 2220800) ಅಥವಾ ಮೂಡಬಿದ್ರೆ ಠಾಣೆ (08258-236333) ಸಂಪರ್ಕಿಸುವಂತೆ ಮೂಡುಬಿದಿರೆ ಠಾಣಾಧಿಕಾರಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News