ವಾಹನ ಸಂಚಾರ ಸ್ಥಗಿತ

Update: 2017-04-22 13:06 GMT

ಮಂಗಳೂರು, ಎ.22: ನಗರದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ಯು.ಪಿ. ಮಲ್ಯ ಕ್ರಾಸ್ (ಓಲ್ಡ್ ಕೆಂಟ್) ರಸ್ತೆಯ ದುರಸ್ತಿ ಕಾಮಗಾರಿಯು ಮೇ 14 ರವರೆಗೆ ನಡೆಯಲಿದ್ದು, ಆವರೆಗೆ ಈ ರಸ್ತೆಯಲ್ಲಿ ಸಂಪೂರ್ಣ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು.

ಕಾಮಗಾರಿ ನಡೆಯವ ಸಮಯ ಯು.ಪಿ ಮಲ್ಯ ರಸ್ತೆ ಕ್ರಾಸ್ ಕಡೆಯಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಕಡೆಗೆ ಎಲ್ಲ ತರಹದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇಂದ್ರ ಮಾರುಕಟ್ಟೆ - ಕ್ಲಾಕ್ ಟವರ್ ಕಡೆಯಿಂದ ಸೆಂಟ್ರಲ್ ರೈಲು ನಿಲ್ದಾಣ, ಅತ್ತಾವರದ ಕಡೆಗೆ ಸಂಚರಿಸುವ ಎಲ್ಲ ತರಹದ ವಾಹನಗಳು ಕೇಂದ್ರ ಮಾರುಕಟ್ಟೆ ರಥಬೀದಿ ಕಡೆಯಿಂದ ಬಂದು ಕೆ.ಬಿ. ಕಟ್ಟೆ ಬಳಿ ಎಡಕ್ಕೆ ತಿರುಗಿ ಹಂಪನಕಟ್ಟೆ - ಟಾಟಾ ಶೋರೂಮ್ - ಮಿಲಾಗ್ರಿಸ್ - ನೂರ್ ಮಸೀದಿ ರಸ್ತೆಯ ಮೂಲಕ ಸಂಚರಿಸುವುದು.

ಈ ಮಾರ್ಪಾಡು ಪೊಲೀಸ್ ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಮಂಗಳೂರು ನಗರ ಇವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News