ನಾಳೆ ಕಾಸರಗೋಡಿನಲ್ಲಿ ಧರಣಿ

Update: 2017-04-23 18:33 GMT

ಕಾಸರಗೋಡು, ಎ.23: ಹಳೆ ಚೂರಿಯಲ್ಲಿ ಮದ್ರಸ ಶಿಕ್ಷಕರಾಗಿದ್ದ ರಿಯಾಝ್ ವೌಲವಿಯವರ ಕೊಲೆಯ ಹಿಂದಿನ ಸಂಚನ್ನು ಬಯಲಿಗೆ ತರುವಂತೆ ಒತ್ತಾಯಿಸಿ ಕಾಸರಗೋಡು ಯುವಜನ ಒಕ್ಕೂಟ ಎ. 25ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಿದೆ.

  ಬೆಳಗ್ಗೆ 10ರಿಂದ ಸಂಜೆ 3ರ ತನಕ ನಡೆಯುವ ಧರಣಿಯನ್ನು ಗುಜರಾತ್‌ನ ಮಾಜಿ ಡಿಜಿಪಿ ಹಾಗೂ ಮಾನವ ಹಕ್ಕು ಹೋರಾಟಗಾರ ಆರ್.ಬಿ. ಶ್ರೀಕುಮಾರ್ ಉದ್ಘಾಟಿಸುವರು.

 ಶಾಸಕ ಎನ್.ಎ.ನೆಲ್ಲಿಕುನ್ನು, ಮಾಜಿ ಸಚಿವ ಸಿ.ಎಚ್. ಕುಞಂಬು, ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹೀಂ, ಸ್ವಾಮಿ ವರ್ಕಲರಾಜ್, ಖಾಸಿಂ ಇರಿಕ್ಕೂರು ಮೊದಲಾದವರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News