ಚೆನ್ನೈ ಬಂದ್ ಬಹುತೇಕ ಯಶಸ್ವಿ: ಸ್ಟಾಲಿನ್ ಬಂಧನ

Update: 2017-04-25 09:07 GMT

ಚೆನ್ನೈ,ಎ.25: ಬಂದ್‌ನ ಪ್ರಯುಕ್ತ ರಸ್ತೆ ತಡೆ ಒಡ್ಡಿದ ಆರೋಪದಲ್ಲಿ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ರನ್ನು ತಿರುವೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಠಿಣ ಬರದಿಂದ ತಮಿಳ್ನಾಡಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ತಮಿಳ್ನಾಡಿನ ಪ್ರತಿಪಕ್ಷಗಳು ಬಂದ್ ಗೆ ಕರೆನೀಡಿವೆ. ಸ್ಟಾಲಿನ್‌ರ ಜೊತೆ ಇತರ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮಿಳ್ನಾಡಿನಲ್ಲಿ140 ವರ್ಷಗಳ ಅತ್ಯಂತ ಭೀಕರ ಬರ ಬಂದಪ್ಪಳಿಸಿದೆ. ರೈತರ ಸಾಲವನ್ನು ಮನ್ನಾಮಾಡಬೇಕು ಎಂದು ಪ್ರತಿಪಕ್ಷಗಳು ಬಂದ್ ಮೂಲಕ ಆಗ್ರಹಿಸುತ್ತಿವೆ. ಬಂದ್‌ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಅಂಗಡಿಗಳು ಮುಚ್ಚಿಕೊಂಡಿವೆ. ವಿವಿಧ ವ್ಯಾಪಾರಿ ಸಂಘಟನೆಗಳು, ಕಾರ್ಮಿಕ ಸಾಘಟನೆಗಳು, ಚಲನಚಿತ್ರ ಕಾರ್ಯಕರ್ತರು ಬಂದ್‌ಗೆ ಬೆಂಬಲ ಘೋಷಿಸಿದ್ದಾರೆ. ದಿಲ್ಲಿಯಲ್ಲಿ ರೈತರ ಪ್ರತಿಭಟನೆಯನ್ನು ನಿನ್ನೆ ಹಿಂದಕ್ಕೆ ಪಡೆಯಲಾಗಿತ್ತು. ಅದೇ ವೇಳೆ ರಾಜ್ಯದಲ್ಲಿ ನಡೆಯುವ ಬಂದ್‌ನಲ್ಲಿ ರೈತರು ಪಾಲ್ಗೊಳ್ಳಬೇಕೆಂದು ಡಿಎಂಕೆ ಕರೆನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News