ಇಡ್ಯಾ: ಖಿಲ್‌ರಿಯಾ ಉರೂಸ್ ಸಮಾರೋಪ

Update: 2017-04-25 16:36 GMT

ಸುರತ್ಕಲ್, ಎ.25: ಇಲ್ಲಿನ ಇಡ್ಯಾ ಅಭಿಲ್ ಅಬ್ಬಾಸ್ ಖಿಲ್‌ರ್ ನಬಿ ಅವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ 56ನೆ ವಾರ್ಷಿಕ ಖಿಲ್‌ರಿಯಾ ಉರೂಸ್ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಲ್ಹಾಜ್ ಮುಹಮ್ಮದ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್ ವಹಿಸಿದ್ದರು. ಅಲ್ಹಾಜ್ ಕೆ.ಎಸ್. ಸೈಯದ್ ಅಲೀ ತಂಙಳ್ ಕುಂಬೋಳ್ ದುಆ ನೆರವೇರಿಸಿದರು. ಡಾ. ಅಲ್ಹಾಜ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ, ಆಹಾರ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ಇಸ್ಲಾಮಿಕ್ ಸೆಂಟರ್‌ನ ಪ್ರೊಫೆಸರ್ ಅನೀಸ್ ಕೌಸರಿ ಮುಖ್ಯ ಭಾಷಣಗೈದರು.

ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸೀದಿ ಯ ಖತೀಬ್ ಹಾಜಿ ಬಿ.ವೈ. ಇಸ್ಮಾಯಿಲ್ ಸಅದಿ, ಕೆ.ಐಸಿ. ಕುಂಬ್ರದ ನಿರ್ದೇಶಕ ಹುಸೈನ್ ದಾರಿಮಿ, ಇಡ್ಯಾ ಖಿಲ್‌ರಿಯಾ ಆಂಗ್ಲ ಮಧ್ಯಮ ಶಾಲೆಯ ಅಧ್ಯಕ್ಷ ಅಬೂಬಕರ್, ದ.ಕ. ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಯು.ಬಿ. ಸಲೀಮ್, ಮನಪಾ ಉಪ ಮೇಯರ್ ರಜನೀಶ್ ಕಾಪಿಕಾಡು, ಮನಪಾ ಸದಸ್ಯ ಅಶೋಕ್ ಶೆಟ್ಟಿ, ಸುರತ್ಕಲ್ ಈದ್ಗಾ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಐ.ಯಾಕೂಬ್, ಖಿಲ್‌ರಿಯಾ ವಿದ್ಯಾ ಸಮಿತಿಯ ಗೌರವಧ್ಯಕ್ಷ ಹಾಜಿ. ಐ. ಬಾಪುಂಞಿ, ದ.ಕ. ಮದರಸ ಮ್ಯಾನೇಜ್ ಮೆಂಟ್‌ದ ಅಧ್ಯಕ್ಷ ಹಾಜಿ.ಐ. ಮೊಯ್ದಿನಬ್ಬ, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಗಂಗಾಧರ ಅಡ್ವೊಕೇಟ್, ಮುಕ್ಕ ಧೂಮಾವತಿ ಪ್ರಾಥಮಿಕ ಶಾಲೆಯ ಸಂಚಾಲಕ ಸೂರ್ಯನಾರಾಯಣ ಎಚ್., ಹೊಸಬೆಟ್ಟು ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಶರತ್ ಎಲ್ ಕರ್ಕೇರ, ನೂರಿ ಸೀಫುಟ್‌ನ ಮಾಲಕ ಕೆ. ಅಬ್ದುಲ್ ರಹಿಮಾನ್, ಬದ್ರಿಯಾ ಫಿಶರಸ್‌ನ ಮಾಲಕ ಬಿ.ಎಸ್. ಸಂಶುದ್ದೀನ್, ಸುಪ್ರೀಂ ಟ್ರೆಡರ್ಸ್‌ನ ಹಾಜಿ. ಐ. ಮಯ್ಯದ್ದಿ, ಮುಕ್ಕ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಕಾನಾ ಜುಮಾ ಮಸೀದಿಯ ಅಧ್ಯಕ್ಷ ಉಮರ್ ಅನೀಸ್, ಅಬ್ದುಲ್ಲಾ ದಾರಿಮಿ, ಉಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

ಮುಹಮ್ಮದ್ ತೌಫೀಕ್ ಸ್ವಾಗತಿಸಿದರು. ಹನೀಫ್ ದಾರಿಮಿ, ಮುಹಮ್ಮದ್ ತೌಫೀಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News