ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನ: ಎ.28ರಂದು ಮಾರ್ನಮಿಕಟ್ಟೆಯಲ್ಲಿ ಸಾರ್ವಜನಿಕ ಸಭೆ
ಮಂಗಳೂರು, ಎ.26: ಜಮಾಅತೆ ಇಸ್ಲಾಮೀ ಹಿಂದ್ ದೇಶಾದ್ಯಂತ ಎ.23ರಿಂದ ಮೇ 7ರವರೆಗೆ ಹಮ್ಮಿಕೊಂಡಿರುವ ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನದ ಅಂಗವಾಗಿ ಎ.28ರಂದು ನಗರದ ಮಾರ್ನಮಿಕಟ್ಟೆಯಲ್ಲಿರುವ ನಾಯಕ್ಸ್ ಗ್ರೌಂಡ್ನಲ್ಲಿ ಸಂಜೆ 7:15ಕ್ಕೆ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ.
ಜಮಾಅತೆ ಇಸ್ಲಾಮೀ ಹಿಂದ್ ಬೋಳಾರ-ಜೆಪ್ಪು ವರ್ತುಲದ ವತಿಯಿಂದ ಆಯೋಜಿಸಲಾಗಿರುವ ಈ ಸಭೆಯಲ್ಲಿ ನಗರದ ಕಚ್ಚೀ ಮೇಮನ್ ಮಸೀದಿಯ ಖತೀಬ್ ಹುಸೈನ್ ಸುಹೈಬ್ ನದ್ವಿಯವರು 'ಇಸ್ಲಾಮೀ ಶರೀಅತ್' ವಿಷಯದಲ್ಲಿ ಉರ್ದುವಿನಲ್ಲಿ, ಕಸ್ಬಾ ಬೆಂಗ್ರೆಯ ಅನಸ್ ಬಿನ್ ಮಾಲಿಕ್ ಜುಮಾ ಮಸೀದಿಯ ಖತೀಬ್ ಸಾಜಿದ್ ಮೌಲವಿ ಪರಪ್ಪೂರ್ ಕುಟುಂಬ ಜೀವನದಲ್ಲಿ 'ಶರೀಅತ್ ಪಾಲನೆ' ಎಂಬ ವಿಷಯದಲ್ಲಿ ಮಲಯಾಳಂನಲ್ಲಿ ಹಾಗೂ "ಸಾಮುದಾಯಿಕ ಐಕ್ಯ' ಎಂಬ ವಿಷಯದಲ್ಲಿ ತೊಕ್ಕೊಟ್ಟು ಮಸ್ಜಿದುಲ್ ಹುದಾದ ಖತೀಬ್ ಮುಹಮ್ಮದ್ ಕುಂಞಿ ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಸಯ್ಯದ್ ಯಹ್ಯಾ ತಂಙಳ್ ಮದನಿ ವಹಿಸಲಿದ್ದಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಬೋಳಾರ-ಜೆಪ್ಪು ವರ್ತುಲವು ಪ್ರಕಟನೆಯಲ್ಲಿ ತಿಳಿಸಿದೆ.