ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಉಗ್ರಾಣ ಮುಹೂರ್ತ
ಮುಲ್ಕಿ, ಎ.26: ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನಡೆಯಿತು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಉಗ್ರಾಣ ಮೂಹೂರ್ತ ನಡೆಸಿ ಶುಭಹಾರೈಸಿದರು. ಈ ಸಂದರ್ಭ ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿದರು.
ಅತ್ತೂರುಬೈಲು ಶ್ರೀ ಮಹಾಗಣಪತಿ ಮಂದಿರದ ಗಣಪತಿ ಉಡುಪ, ಕೃಷ್ಣ ಭಟ್ ಅಂಗಡಿಮಾರ್ ಕೆಮ್ರಾಲ್, ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ, ಪವಿತ್ರ ಪಾಣಿ ಲಕ್ಷ್ಮೀನಾರಾಯಣ ಆಚಾರ್ ಶರಣ, ಸುರಗಿರಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಅಂಗಡಿಮಾರ್ ವಿಶ್ವೇಶ ಭಟ್, ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಎನ್. ಶೆಟ್ಟಿ, ಕಾರ್ಯಾಧ್ಯಕ್ಷ ವೆಂಕಟರಾಜ ಉಡುಪ ಅತ್ತೂರುಬೈಲು, ಪ್ರಧಾನ ಕಾರ್ಯದರ್ಶಿ ಕೆ. ಲವ ಶೆಟ್ಟಿ ಕೆಮ್ರಾಲ್, ಪ್ರಧಾನ ಕೋಶಾಧಿಕಾರಿ ರಮಾನಾಥ ಎನ್.ಶೆಟ್ಟಿ ಕೆಮ್ರಾಲ್, ಮೊಕ್ತೇಸರರಾದ ವೈ. ಬಾಲಚಂದ್ರ ಭಟ್ ಕೋಡುಮನೆ, ಪ್ರಕಾಶ್ ಜೆ.ಶೆಟ್ಟಿ, ಕೆ.ಅನಂತರಾವ್ ಭಟ್ ಅಂಗಡಿಮಾರ್, ಧನಂಜಯ ಶೆಟ್ಟಿಗಾರ್ ಸಾಗರಿಕ ಮತ್ತಿತರರು ಉಪಸ್ಥಿತರಿದ್ದರು.