ಜಲೀಲ್ ಕರೋಪಾಡಿ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: 7 ದುಷ್ಕರ್ಮಿಗಳ ಬಂಧನ

Update: 2017-04-29 05:54 GMT

ಬಂಟ್ವಾಳ, ಎ.29: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣವನ್ನು ಭೇದಿಸಿರುವ ವಿಶೇಷ ಪೊಲೀಸರ ತಂಡ 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. 

ಕರೋಪಾಡಿ ಗ್ರಾಮದ ರಾಜೇಶ್ ನಾಯಕ್, ಮಾಣಿಯ ನರಸಿಂಹ, ಪುತ್ತೂರು ತಾಲೂಕಿನ ಪ್ರಜ್ವಲ್, ಪುಷ್ಪರಾಜ್ ಗೌಡ, ರೋಷನ್, ಪುನೀತ್, ಸಚಿನ್ ಬಂಧಿತ ಆರೋಪಿಗಳು. 

ಕನ್ಯಾನದಲ್ಲಿ ಕೆಲವು ತಿಂಗಳ ಹಿಂದೆ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೋರ್ವ ಪ್ರೀತಿಸಿದ್ದ ಪ್ರಕರಣದಲ್ಲಿ ಜಲೀಲ್ ಅವರು ಯುವಕನಿಗೆ ಬೆಂಬಲ ನೀಡಿದ್ದರ ದ್ವೇಷದಿಂದ ಹಾಗೂ ರಾಜಕೀಯವಾಗಿ ಜಲೀಲ್ ಮುನ್ನೇರುತ್ತಿದ್ದ ದ್ವೇಷದಿಂದ ಈ ಕೊಲೆ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಗಳೆಲ್ಲರೂ ಸಂಘ ಪರಿವಾರದ ಕಾರ್ಯಕರ್ತರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News