ಜಯಕರ್ನಾಟಕ ಪದಾಧಿಕಾರಿಗಳ ಆಯ್ಕೆ

Update: 2017-04-30 11:55 GMT

ಉಡುಪಿ, ಎ.30: ಜಯ ಕರ್ನಾಟಕ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ಆಶ್ರಯದಾತ ಕೆ.ರಮೇಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಶನಿವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸುದೀಪ್ ಕುಮಾರ್ ನೂತನ ಅಧ್ಯಕ್ಷರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

 ಗೌರವಾಧ್ಯಕ್ಷರಾಗಿ ನಿರಂಜನ ಹೆಗ್ಡೆ ಅಲ್ತಾರು, ಉಪಾಧ್ಯಕ್ಷರುಗಳಾಗಿ ಶ್ರೀನಿವಾಸ ಶೆಟ್ಟಿಗಾರ್ ಬಾರಕೂರು, ಶರತ್ ಶೆಟ್ಟಿ ಕುಂದಾಪುರ, ಹರೀಶ್ ಶೆಟ್ಟಿ ಉಚ್ಚಿಲ, ಶಶಿಕಾಂತ್ ಶೆಟ್ಟಿ, ಗೌರವ ಸಲಹೆಗಾರರಾಗಿ ಸುಧಾಕರ ರಾವ್ ಬಾರ ಕೂರು, ಪ್ರಧಾನ ಸಂಚಾಲಕರಾಗಿ ಅಣ್ಣಪ್ಪ ಕುಲಾಲ್ ಹೆಬ್ರಿ, ಕಾರ್ಯಾಧ್ಯಕ್ಷ ರಾಗಿ ಕರುಣಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ನಿತ್ಯಾನಂದ ಅಮೀನ್, ಕಾನೂನು ಸಲಹೆಗಾರರಾಗಿ ಅಸದುಲ್ಲಾ ಕಟಪಾಡಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿ ಮಾರ್ಕ್ ಡಿಸೋಜ, ಉಪ್ಪೂರು ಘಟಕದ ಅಧ್ಯಕ್ಷ ಮಹೇಶ್, ಮಣಿಪಾಲ ಘಟಕದ ಅಧ್ಯಕ್ಷ ಲೂವಿಸ್, ವಿಜಯ ಕುಮಾರ್, ಕುಂದಾಪುರ ತಾಲೂಕು ಅಧ್ಯಕ್ಷ ದಿನಕರ ಶೆಟ್ಟಿ, ಶಶಿಕಾಂತ್ ಪಡು ಬಿದ್ರಿ, ರಘುಪತಿ ಭಟ್, ರಾಜೇಶ್ ಶೇಟ್, ದ್ವಾರಕನಾಥ್ ಪೈ ಮೊದಲಾದ ವರು ಉಪಸ್ಥಿತರಿದ್ದರು. ಸುಧಾಕರ ರಾವ್ ಬಾರಕೂರು ಸ್ವಾಗತಿಸಿದರು. ಶರತ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News