ಬಾವಿಗೆ ಬಿದ್ದು ಮೃತ್ಯು

Update: 2017-04-30 14:57 GMT

 ಹೆಬ್ರಿ, ಎ.30: ಕಲ್ಲು ಕಟ್ಟುವ ಕೆಲಸ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕಳ್ತೂರಿನ ಹಾಡಿಮನೆ ಎಂಬಲ್ಲಿ ಎ.29 ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ವಿಶ್ವನಾಥ ನಾಯ್ಕ್(30) ಎಂದು ಗುರುತಿಸಲಾಗಿದೆ. ಇವರು ಚಂದ್ರಶೇಖರ ನಾಯ್ಕ್ ಎಂಬವರೊಂದಿಗೆ ಹಾಡಿಮನೆಯ ಚಂದ್ರಶೇಖರ ಶೆಟ್ಟಿ ಎಂಬವರ ಮನೆಯ ಬಾವಿಯ ತಳದಿಂದ ಸುಮಾರು 5 ಅಡಿ ಎತ್ತರದಲ್ಲಿ ಕಲ್ಲು ಕಟ್ಟುವ ಕೆಲಸವನ್ನು ಮಾಡುತ್ತಿದ್ದು, ಈ ವೇಳೆ ವಿಶ್ವನಾಥ ನಾಯ್ಕ್ ಕಲ್ಲನ್ನು ಎತ್ತಿ ಚಂದ್ರಶೇಖರ ನಾಯ್ಕ್ಗೆ ನೀಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಕಲ್ಲು ಸಮೇತ ಬಾವಿಗೆ ಬಿದ್ದರು.

ಇದರ ಪರಿಣಾಮ ಅವರ ತಲೆಗೆ ಬಾವಿಯಲ್ಲಿದ್ದ ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಹೆಬ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾ ಯಿತು. ಆದರೆ ದಾರಿ ಮಧ್ಯೆ ಅವರು ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News