×
Ad

ಮುಲ್ಕಿ : ಬಸ್‌ - ಆಟೊ ರಿಕ್ಷಾ ಢಿಕ್ಕಿ : ಇಬ್ಬರಿಗೆ ಗಂಭೀರ ಗಾಯ

Update: 2017-04-30 21:03 IST

ಮುಲ್ಕಿ, ಎ.30: ಕಿನ್ನಿಗೋಳಿಗೆ ಬರುತ್ತಿದ್ದ ಬಸ್‌ಗೆ ಕಟೀಲು ಕಡೆ ಸಂಚರಿಸುತ್ತಿದ್ದ ಆಟೊ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ರವಿವಾರ ಮೂರು ಕಾವೇರಿ ದ್ವಾರದ ಬಳಿ ನಡೆದಿದೆ.

ಘಟನೆಯಿಂದ ರಿಕ್ಷಾದ ಚಾಲಕ ವಿಲಿಯಮ್ಸ್ ಮತ್ತು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಯ ವಿವರ: ನವದುರ್ಗ ಖಾಸಗಿ ಬಸ್ ಕಟೀಲಿನಿಂದ ಪ್ರಯಾಣಿಕರನ್ನು ಹೇರಿಕೊಂಡು ಕಿನ್ನಿಗೋಳಿಗೆ ತೆರಳುತ್ತಿದ್ದ ವೇಳೆ ಕಿನ್ನಿಗೋಳಿಯಿಂದ ಕಟೀಲಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೊ ರಿಕ್ಷಾದ ಚಾಲಕ ವಿಲಿಯಮ್ಸ್ ರಸ್ತೆ ಸಂಚಾರವನ್ನು ಗಮನಿಸದೇ ಏಕಾಏಕಿ ರಿಕ್ಷಾವನ್ನು ಬಲಭಾಗಕ್ಕೆ ತಿರುಗಿಸಿದ ಪರಿಣಾಮ ಮುಂದಿನಿಂದ ಬರುತ್ತಿದ್ದ ಬಸ್‌ನ ಮುಂಭಾಗಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕ ಸಹಿತ ಸ್ಥಳೀಯ ರಿಕ್ಷಾ ಚಾಲಕ ವಿಲಿಯಮ್ಸ್ ಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ತಕ್ಷಣ ಸ್ಥಳಿಯರು ಇಬ್ಬರನ್ನೂ ಸಮೀಪದ ಖಾಸಗಿ ಸ್ಪತ್ರೆಗ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸಂಬಂಧ ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News