ಕಿನ್ನಿಗೋಳಿ: ರಸ್ತೆ ಅಪಘಾತಕ್ಕೆ ಮಹಿಳೆ ಬಲಿ

Update: 2017-05-03 10:48 GMT

ಮುಲ್ಕಿ, ಮೇ 3: ಇಲ್ಲಿನ ಕಿನ್ನಿಗೋಳಿ ಸಮೀಪದ ಉಲ್ಲಂಜೆ ಬಳಿ ನಡೆದ ಅಪಘಾತವೊಂದರಲ್ಲಿ ಮಹಿಳೆಯೊರ್ವರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಮೃತರನ್ನು ಮುಲ್ಕಿ ಸಮೀಪದ ಕಾರ್ನಾಡು ನಿವಾಸಿ ರಶ್ಮಿತಾ(30) ಎಂದು ಗುರುತಿಸಲಾಗಿದೆ.
   ರಶ್ಮಿತಾ ಕಟೀಲು ಸಮೀಪದ ಮಲ್ಲಿಗೆ ಅಂಗಡಿಯಿಂದ ತನ್ನ ಪತಿ ದುರ್ಗಪ್ರಸಾದ್ ಹಾಗೂ ತನ್ನ 5 ವರ್ಷದ ಮಗನೊಂದಿಗೆ ಕಿನ್ನಿಗೋಳಿಗೆ ಆ್ಯಕ್ಟಿವಾ ಹೋಂಡಾದಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಉಲ್ಲಂಜೆ ತಿರುವಿನ ಇಳಿಜಾರು ಪ್ರದೇಶದಲ್ಲಿ ಸ್ಕೂಟರ್ ಸ್ಕಿಡ್ ಆಗಿ ರಸ್ತೆ ಬದಿಗೆ ಉರುಳಿಬಿದ್ದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ರಶ್ಮಿತಾ ಗಂಭೀರ ಗಾಯಗೊಂಡಿದ್ದರು.

ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದ ಕಾರಣ ರಶ್ಮಿತಾರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.

ರಶ್ಮಿತಾ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದರೆನ್ನಲಾಗಿದೆ.
 ಈ ಸಂಬಂಧ ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News