ಕಾಲುಜಾರಿ ಬಾವಿಗೆ ಬಿದ್ದು ಯುವಕ ಮೃತ್ಯು

Update: 2017-05-03 18:24 GMT

ಮಂಜೇಶ್ವರ, ಮೇ 3: ಬಾವಿಯೊಂದಕ್ಕೆ ಇಣುಕಿದ ಯುವಕನೋರ್ವ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಅಂಬಿತ್ತಡಿ ಅಕ್ಕರೆ ಎಂಬಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಅಕ್ಕರೆ ಮೂಸಾ ಎಂಬವರ ಪುತ್ರ ಶಾಹುಲ್ ಹಮೀದ್ ಯಾನೆ ಸಲೀಂ (21) ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ 6 ಗಂಟೆಗೆ ಹಸೈನಾರ್ ಎಂಬವರ ಹಿತ್ತಲಿನಲ್ಲಿ ತೋಡಲಾಗುತ್ತಿದ್ದ 17 ಅಡಿ ಆಳದ ಬಾವಿಗೆ ಸಲೀಂ ಇಣುಕಿದ್ದು, ಈ ಸಂದರ್ಭ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಘಟನೆ ತಿಳಿದು ತಲುಪಿದ ಸ್ಥಳೀಯರು ಸಲೀಂರನ್ನು ಬಾವಿಯಿಂದ ಮೇಲಕ್ಕೆತ್ತಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಸಿ.ಎಚ್.ಸಿ ಗೆ ಕೊಂಡೊಯ್ಯಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News