ಅಪಘಾತ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ: ಇಬ್ಬರಿಗೆ ಗಾಯ

Update: 2017-05-07 16:46 GMT

ಮಂಗಳೂರು, ಮೇ 7: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಬಿಜೈಯಲ್ಲಿ ನಡೆದಿದೆ.

ಗಾಯಗೊಂಡವರನ್ನು ಸುಶಿತಾ (2), ರಮೇಶ್ (50) ಎಂದು ಗುರುತಿಸಲಾಗಿದೆ. 

ಶೋಭಾ ಎಂಬವರು ಮತ್ತು ಮಗಳು ಸುಶಿತಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ರಿಕ್ಷಾದಲ್ಲಿ ಯೆಯ್ಯಾಡಿಯಿಂದ ಬಲ್ಲಾಳ್‌ಬಾಗ್ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಬಿಜೈ ಮ್ಯೂಸಿಯಂ ಎದುರು ರಮೇಶ್ ಎಂಬವರು ಹಠಾತ್ ಆಗಿ ರಸ್ತೆ ದಾಟಲು ಬಂದಾಗ, ರಿಕ್ಷಾ ಚಾಲಕ ತಪ್ಪಿಸುವ ಪ್ರಯತ್ನ ಮಾಡಿದರೂ ಢಿಕ್ಕಿಯಾಗಿ ಪಲ್ಟಿಯಾಗಿದೆ. ಇದರಿಂದ ರಮೇಶ್ ಅವರ ತಲೆಗೆ ಗಾಯವಾದರೆ, ಮಗು ಸುಶಿತಾ ಕಾಲಿಗೆ ಗಾಯವಾಗಿದೆ. ಘಟನೆಯಲ್ಲಿ ಶೋಭಾ ಮತ್ತು ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News