×
Ad

ಸಿಎಂ ವಿರುದ್ಧ ಆರೋಪಕ್ಕೆ ಸಂಬಂಧಿಸಿ ನಾಳೆ ಬೆಳಗ್ಗೆ 11:30ಕ್ಕೆ ಸಿಬಿಐಗೆ ದಾಖಲೆ ಸಲ್ಲಿಕೆ : ಕಪಿಲ್‌ ಮಿಶ್ರಾ

Update: 2017-05-08 17:26 IST

ಹೊಸದಿಲ್ಲಿ, ಮೇ 8:  ದಿಲ್ಲಿಯ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ನನ್ನ ಎದುರಿನಲ್ಲೇ   ಸತ್ಯೇಂದ್ರ ಜೈನ್‌ ಅವರಿಂದ  ಹಣ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ 11:30ಕ್ಕೆ  ಸಿಬಿಐಗೆ ಈ ಆರೋಪಕ್ಕೆ ಸಂಬಂಧಿಸಿದ ಎಲ್ಲ  ದಾಖಲೆಗಳನ್ನು  ಸಲ್ಲಿಸುವುದಾಗಿ ಮಾಜಿ ಸಚಿವ ಕಪಿಲ್‌ ಮಿಶ್ರಾ ತಿಳಿಸಿದ್ದಾರೆ.
ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಸಿಎಂ ಅರವಿಂದ್ ಕೇಜ್ರಿವಾಲ್‌ ಅವರು ಸಂಬಂಧಿಗಾಗಿ ದಿಲ್ಲಿಯ ಛತರ್ಪುರ್ ನಲ್ಲಿ  7 ಎಕ್ರೆ ಜಮೀನು ಖರೀದಿಗಾಗಿ   ಡೀಲ್‌ ಮಾಡಿದ್ದಾರೆ. ಈ ಸಂಬಂಧ ನಾನು ಸಿಬಿಐನಲ್ಲಿ ಕೇಸು ದಾಖಲಿಸುವೆ"  ಎಂದು ಮಾಹಿತಿ ನೀಡಿದರು.
ನಾನು ಬಿಜೆಪಿ ಏಜೆಂಟ್‌ ಅಲ್ಲ. ಬಿಜೆಪಿ ಸೇರುವುದಿಲ್ಲ.ಆಮ್ ಆದ್ಮಿ ಪಕ್ಷವ ನ್ನು ಬಿಟ್ಟು ಹೋಗುವುದಿಲ್ಲ.ನನ್ನನ್ನು ಆಪ್ ನಿಂದ ಕಿತ್ತು ಹಾಕಲು ಯಾರಿಗೂ ಸಾಧ್ಯವಿಲ್ಲ   ಎಂದು ಸ್ಪಷ್ಟಪಡಿಸಿದರು.

"ಆಪ್ ನಲ್ಲಿ 4-5 ನಾಯಕರು  ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ದಿಲ್ಲಿಯ ಮಹಾನಗರ ಪಾಲಿಕೆ ಚುನಾವಣೆಗೆ ಹಣ ಸಂಗ್ರಹಿಸಲಾಗಿತ್ತು. ಪಂಜಾಬ್ ಚುನಾವಣೆಯ ವೇಳೆಯೂ ಆಪ್ ಟಿಕೆಟ್ ಆಕಾಂಕ್ಷಿಗಳಿಂದ ಹಣ ಸಂಗ್ರಹಿಸಲಾಗಿತ್ತು.  ಸಿಎಂ ಕೇಜ್ರಿವಾಲ್ ಬೆಂಬಲಿಗರು ನನಗೆ  ಕೊಲೆ ಬೆದರಿಕೆ ಹಾಕಿದ್ದಾರೆ . ಆದರೆ ನಾನು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ "ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News