ವಾರ್ತಾಭಾರತಿ ಕಚೇರಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಭೇಟಿ

Update: 2017-05-10 11:52 GMT

ಮಂಗಳೂರು, ಮೇ 10: ವಾರ್ತಾ ಭಾರತಿಯ ಪ್ರಧಾನ ಕಚೇರಿಗೆ ಲೋಕೊಪಯೋಗಿ ಇಲಾಖೆ ಸಚಿವ ಡಾ. ಎಚ್. ಸಿ. ಮಹದೇವಪ್ಪ ಇಂದು ಅಪರಾಹ್ನ ಭೇಟಿ ನೀಡಿದರು.

ಕಚೇರಿಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಪತ್ರಿಕಾ ಬಳಗದ ಸದಸ್ಯರ ಜೊತೆ ಸಚಿವರು ಮಾತನಾಡಿದರು. ನಂತರ ಮಾತನಾಡಿದ ಅವರು ‘ವಾರ್ತಾ ಭಾರತಿ’ ಪತ್ರಿಕೆ ಯಾವುದೇ ಒತ್ತಡಕ್ಕೆ ಒಳಗಾಗದೆ ನೇರ, ಸ್ಪಷ್ಟ ಮತ್ತು ನಿಖರವಾದ ಸುದ್ದಿಯನ್ನು ನಿರಂತರ ಪ್ರಸಾರ ಮಾಡುತ್ತಿದೆ. ದೇಶದ ಜಾತ್ಯತೀತ ತತ್ವವನ್ನು ಎತ್ತಿ ಹಿಡಿಯುವ ಲೇಖನ, ಸಂಪಾದಕೀಯಗಳ ಮೂಲಕ ದುರ್ಬಲ ವರ್ಗಗಳ ನೈಜ ಧ್ವನಿಯಾಗಿದೆ  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾರ್ತಾ ಭಾರತಿಯ ಮಾರ್ಕೆಟಿಂಗ್ ಮ್ಯಾನೇಜರ್ ಮೊಹಮ್ಮದ್ ಮುಸ್ಲಿಂ ಕೊಪ್ಪ ಸ್ವಾಗತಿಸಿದರು.  ಮಂಗಳೂರು ಬ್ಯುರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್. ಸ್ಮರಣಿಕೆ ನೀಡಿದರು. ಸುದ್ದಿ ಸಂಪಾದಕ ಬಿ ಎಂ ಬಷೀರ್ ಉಪಸ್ಥಿತರಿದ್ದರು . ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಎಐಸಿಸಿ ಮುಖಂಡ ಪಿ.ವಿ. ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News