ನೂತನ ಕೆಎಸ್ಸಾರ್ಟಿಸಿ ಬಸ್ ಕಾರ್ಯಾಚರಣೆ

Update: 2017-05-10 13:53 GMT

ಮಂಗಳೂರು, ಮೇ 10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲ ಹಾಗೂ ಉತ್ತಮ ಸೇವೆಗಾಗಿ ಉಡುಪಿ-ಶಿವಮೊಗ್ಗ ವಯಾ ಮಣಿಪಾಲ, ಹೆಬ್ರಿ, ಅಗುಂಬೆ, ತೀರ್ಥಹಳ್ಳಿ ಮಾರ್ಗದಲ್ಲಿ ನೂತನ ಬಸ್ ಸಂಚಾರ ಆರಂಭಿಸಲಾಗಿದೆ.

  ಉಡುಪಿಯಿಂದ ಪ್ರತೀ ದಿನ ಬೆಳಗ್ಗೆ 6:30, 7, 7:30, 8, 8:30, ಮಧ್ಯಾಹ್ನ 3, 3:30, 4, 4:30, 5:30 ವೇಳಾಪಟ್ಟಿಯಂತೆ ಬಿಡಲಾಗುವುದು.

ಹೆಚ್ಚಿನ ಮಾತಿಗಾಗಿ ಘಟಕ ವ್ಯವಸ್ಥಾಪಕರು, ಉಡುಪಿ ಘಟಕ ಮೊಬೈಲ್ ಸಂ: 7760995407 ಹಾಗೂ ಸಂಚಾರ ನಿಯಂತ್ರಕರು, ಉಡುಪಿ ಮೊಬೈಲ್ ಸಂ. 9663266400 ಅವರನ್ನು ಸಂಪರ್ಕಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News