ಮೇ 16: ಮೂಳೂರು ಮರ್ಕಝ್ ನಲ್ಲಿ ಜಲೀಲ್ ಕರೋಪಾಡಿ ಅನುಸ್ಮರಣೆ

Update: 2017-05-14 17:05 GMT

ಮೂಳೂರು, ಮೇ 14: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಅಬ್ದುಲ್ ಜಲೀಲ್ ಕರೋಪಾಡಿ ಅವರ ಅನುಸ್ಮರಣೆ ಹಾಗೂ ಖತಮುಲ್ ಖುರ್‌ಆನ್ ಮತ್ತು ತಹ್‌ಲೀಲ್ ಸಮರ್ಪಣೆ ಮೇ 16ರಂದು ಮಧ್ಯಾಹ್ನ ಮೂಳೂರು ಮರ್ಕಝ್ ನಲ್ಲಿ ನಡೆಯಲಿದೆ.

ಈ ಸಂದರ್ಭ ಅಸೈಯದ್ ಕೆ ಎಸ್ ಮುಖ್ತಾರ್ ತಂಙಳ್ ಕುಂಬೋಲ್, ಅಲ್ ಹಾಜಿ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಡಿಕೆಯಸ್ಸಿ ಸ್ಥಾಪಕಾಧ್ಯಕ್ಷ ಅಲ್ ಹಾಜಿ ಹಸನುಲ್ ಪೈಝಿ, ಡಿಕೆಯಸ್ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಇಸ್ಮಾಯಿಲ್ ಕಿನ್ಯ ಹಾಗೂ ಇನ್ನಿತರರು ಭಾಗವ ಹಿಸಲಿದ್ದಾರೆ ಎಂದು ಸಂಸ್ಥೆಯ ಮ್ಯಾನೇಜರ್ ಮೌಲಾನಾ ಮುಸ್ತಫಾ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News