ಮುಸ್ಲಿಮ್ ಲೇಖಕರ ಸಂಘದಿಂದ ಇಂದು ಬೊಳುವಾರರಿಗೆ ಸನ್ಮಾನ

Update: 2017-05-18 18:54 GMT

ಮಂಗಳೂರು, ಮೇ 18: ಮುಸ್ಲಿಮ್ ಲೇಖಕರ ಸಂಘವು ರಾಜ್ಯದ ಖ್ಯಾತ ಕಾದಂಬರಿಕಾರ ಬೊಳುವಾರು ಮಹಮದ್ ಕುಂಞಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಗಳೂರಿನ ಪುರಭವನದಲ್ಲಿ ಮೇ 19ರಂದು ಸಂಜೆ 7:20ಕ್ಕೆ ಹಮ್ಮಿಕೊಂಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ರಾಜ್ಯದ ಖ್ಯಾತ ಮುಸ್ಲಿಮ್ ಸಾಹಿತಿಗಳಿಗೆ ನೀಡುವ ಗೌರವಕ್ಕೆ ಈ ಬಾರಿ ಬೊಳುವಾರು ಅವರನ್ನು ಸಂಘವು ಆಯ್ಕೆ ಮಾಡಿದೆ. ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘವು ನೀಡುವ 2015ನೆ ಸಾಲಿನ ರಾಜ್ಯ ಮಟ್ಟದ ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಪತ್ರಕರ್ತ ಬಿ.ಎಂ.ಬಶೀರ್‌ರ ‘ಅಮ್ಮ ಹಚ್ಚಿದ ಒಲೆ’ ಕವನ ಸಂಕಲನವು ಆಯ್ಕೆಯಾಗಿದೆ.

ಸಚಿವ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಹೊಸದಿಲ್ಲಿ ಜೆಎನ್‌ಯುನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ‘ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News