ಬೋಳಿಯಾರು: ಎಸ್ಕೆಎಸ್ಸೆಸ್ಸೆಫ್ನಿಂದ ಮಹಾ ಸಮ್ಮೇಳನ
ಬಂಟ್ವಾಳ, ಮೇ 19: ಹೃದಯ ಶುದ್ದೀಕರಣದೊಂದಿಗೆ ದೇವರಿಗೆ ಸಮೀಪಿಸುವ ಕಾರ್ಯ ಸತ್ಯವಿಶ್ವಾಸಿಗಳಿಂದ ನಡೆಯಬೇಕಿದೆ ಎಂದು ಕೋಟೆಕಾರು ಜುಮಾ ಮಸೀದಿಯ ಮುದರ್ರಿಸ್ ಅಬುಲ್ ಬುಶ್ರಾ ಹಾರೂನ್ ಅಹ್ಸನಿ ಹೇಳಿದರು.
ಎಸ್ಕೆಎಸ್ಸೆಸೆಫ್ ಬೋಳಿಯಾರು, ಕುಕ್ಕೋಟು, ರಂತಡ್ಕ ಶಾಖೆಯ ಆಶ್ರಯದಲ್ಲಿ ಬೋಳಿಯಾರು ವರಕ್ಕಲ್ ಮುಲ್ಲಕೋಯ ತಂಙಳ್ ನಗರದ ಶಂಸುಲ್ ಉಲಮಾ ವೇದಿಕೆಯಲ್ಲಿ ಗುರುವಾರ ನಡೆದ ಸಮಸ್ತ ಆಶಯ ವಿಶದೀಕರಣ ಮಹಾ ಸಮ್ಮೇಳನದಲ್ಲಿ ಮುಖ್ಯ ಅಥಿತಿಯಾಗಿ ಭಾಗಹಿಸಿ ಅವರು ಮಾತನಾಡುತ್ತಿದ್ದರು.
ಏಕ ದೇವರಲ್ಲಿ ವಿಶ್ವಾಸವಿರುವವರು ಪ್ರಥಮವಾಗಿ ಹೃದಯ ಶುದ್ದೀಕರಿಸಬೇಕು. ಅದರೊಂದಿಗೆ ಉತ್ತಮ ಜ್ಞಾನವನ್ನೂ ಸಂಪಾದಿಸಿಕೊಳ್ಳಬೇಕು ಎಂದ ಅವರು, ಅಹಂಕಾರ, ಅಸೂಯೆ, ಮದ, ಮತ್ಸರವನ್ನು ಬಿಟ್ಟು ಸಮಾಜದಲ್ಲಿ ಸಜ್ಜನರಾಗಿ ಬಾಳಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಕಾರ್ಯಕ್ರಮವನ್ನು ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸೈಯದ್ ಇಬ್ರಾಹೀಂ ಬಾತಿಶಾ ತಂಙಳ್ ಅಧ್ಯಕ್ಷತೆ ವಹಿಸಿ ದುಅ ನೆರವೇರಿಸಿದರು. ಕೋಟೆಕಾರ್ ಜುಮಾ ಮಸೀದಿ ಸಹ ಮುದರ್ರಿಸ್ ಹಾಫಿಳ್ ಝೈನಿ ಸಖಾಫಿ ಉಳ್ಳಾಲ, ಉಳ್ಳಾಲ ಕೇಂದ್ರ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶಮೀಮ್ ಸಖಾಫಿ, ಮುಹಮ್ಮದ್ ಕುಟ್ಟಿ ನಿಝಾಮಿ ವಯನಾಡ್ ಕೇರಳ, ದಾರಿಮೀಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಮಾತನಾಡಿದರು.
ಬೋಳಿಯಾರು ಜುಮಾ ಮಸೀದಿ ಅಧ್ಯಕ್ಷ ಬಿ.ಎಂ.ಹನೀಫ್, ಉಪಾಧ್ಯಕ್ಷ ಎಂ.ಅಬೂಬಕರ್, ಕೋಶಾಧಿಕಾರಿ ಅಬ್ದುಲ್ ಕರೀಂ, ಖತೀಬ್ ಎನ್.ಅಬ್ದುರ್ರಹ್ಮಾನ್ ಫೈಝಿ, ಸದರ್ ಮುಅಲ್ಲಿಂ ವಿ.ಟಿ.ಅಬ್ದುಸ್ಸಲಾಂ ಜಿಸ್ತಿ, ಕುಕ್ಕೋಟು ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್ ಹಾಜಿ, ಉಪಾಧ್ಯಕ್ಷ ಬಿ.ಎಂ.ಇಸ್ಮಾಯೀಲ್, ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್, ಖತೀಬ್ ಇಸ್ಹಾಕ್ ಮುಸ್ಲಿಯಾರ್, ಸದರ್ ಮುಅಲ್ಲಿಂ ಕೆ.ಪಿ.ಮುಹಮ್ಮದ್ ಶರೀಫ್ ದಾರಿಮಿ, ತಲೆಮೊಗರು ಜುಮಾ ಮಸೀದಿ ಅಧ್ಯಕ್ಷ ಟಿ.ಎಚ್.ಹೈದರ್ ಹಾಜಿ, ರಂತಡ್ಕ ಜುಮಾ ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ ಖಾದರ್, ಉಪಾಧ್ಯಕ್ಷ ಎಂ.ಆಸಿಫ್, ಪ್ರಧಾನ ಕಾರ್ಯದರ್ಶಿ ಆರ್.ಎಸ್.ಇಬ್ರಾಹೀಂ, ಸ್ವಾಗತ ಸಮಿತಿ ಕನ್ವಿನರ್ ಎಂ.ಎಸ್.ಯೂಸುಫ್, ಕೋಶಾಧಿಕಾರಿ ಎಚ್.ಹಸನಬ್ಬ, ರಂತಡ್ಕ ಎಸ್ಕೆಎಸ್ಸೆಸ್ಸೆಫ್ ಶಾಖೆ ಅಧ್ಯಕ್ಷ ಇಸ್ಹಾಕ್ ರಂತಡ್ಕ, ಕುಕ್ಕೋಟು ಶಾಖೆ ಅಧ್ಯಕ್ಷ ಅಬೂಬಕರ್ ಸಿದ್ದೀಕ್, ಬೋಳಿಯಾರು ಶಾಖೆ ಅಧ್ಯಕ್ಷ ಹಾರಿಸ್ ಕಾಫಿಕಾಡ್, ಮದರಸ ಮ್ಯಾನೇಜ್ಮೆಂಟ್ ಸಜೀಪ ರೇಂಜ್ ಅಧ್ಯಕ್ಷ ಎಸ್.ಅಬ್ಬಾಸ್ ಹಾಜಿ ಸಜಿಪ, ಉದ್ಯಮಿಗಳಾದ ಇಸ್ಹಾಕ್ ಹಾಜಿ ನಾಟೆಕಲ್, ಟಿ.ಆರ್.ಅಬ್ದುಲ್ ಖಾದರ್ ಹಾಜಿ, ಮುಹಮ್ಮದ್ ಶರೀಫ್ ಕಾಫಿಕಾಡ್, ಎಸ್ಯುಐಸಿ ಮುಡಿಪು ಅಧ್ಯಕ್ಷ ಟಿ.ಆರ್.ಅಬ್ದುಲ್ ರಝಾಕ್ ಹಾಜಿ, ಅನುಗ್ರಹ ಟ್ರೇಡರ್ಸ್ ಮಾಲಕ ಶಾಫಿ ಹಾಜಿ ನಡುಪದವು, ಅದ್ದು ರಂತಡ್ಕ, ಟಿ.ಪಿ.ಜಬ್ಬಾರ್ ಬೋಳಿಯಾರು, ಹೈದರ್ ಬೋಳಿಯಾರು, ಜಬ್ಬಾರ್ ಬೋಳಿಯಾರು ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಚೇರ್ಮ್ಯಾನ್ ಅಬ್ದುಲ್ ಖಾದರ್ ಯಮಾನಿ ಪೊಯ್ಯತ್ತಬೈಲ್ ಸ್ವಾಗತಿಸಿದರು. ಇರ್ಫಾನ್ ವೌಲವಿ ಕಾರ್ಯಕ್ರಮ ನಿರೂಪಿಸಿದರು.