ಮೇ 20-21: ಬ್ರಹ್ಮಕಲಶೋತ್ಸವ
Update: 2017-05-19 18:07 IST
ಮಂಗಳೂರು, ಮೇ 19: ಮಾಲೇಮಾರುವಿನ ಮಹಿಷಂದಾಯ ಧೂಮಾವತಿ ಬಂಟ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಧರ್ಮ ದೈವಗಳ ನೇಮ ಮತ್ತು ಬಂಡಿ ಉತ್ಸವವು ಮೇ 20ರಿಂದ 21ರವರೆಗೆ ಜರಗಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 20ರಂದು ಸಂಜೆ 6 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಶಿಲ್ಪಿಯವರಿಂದ ಆಲಯ ಪರಿಗ್ರಹ, ಮುಹೂರ್ತ ಪ್ರಸಾದ ಶುದ್ಧಿ, ವಾಸ್ತುಪೂಜೆ ಜರಗಲಿದೆ. ಮೇ 21ರಂದು ಬೆಳಗ್ಗೆ 8 ಗಂಟೆಗೆ ಗಣಹೋಮ ಸಾನಿಧ್ಯ ಕಲಶ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ದೇರೆಬೈಲ್ ವಿಠಲದಾಸ್ ತಂತ್ರಿಯವರ ನೇರ್ತತ್ವದಲ್ಲಿ ದೈವಸ್ಥಾನಗಳ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಜರಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಬೊಲ್ಯಗುತ್ತು ಎಂ.ವಿನೋದ್ ಶೆಟ್ಟಿ ಕೊಟ್ಟಾರ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್ ಉಪಸ್ಥಿತರಿದ್ದರು.