ರಸ್ತೆ ಅಪಘಾತ: ಬೈಕ್ ಸವಾರರಿಗೆ ಗಾಯ
Update: 2017-05-19 23:12 IST
ಮಂಗಳೂರು, ಮೇ 19: ಅಡ್ಡೂರು ಸಮೀಪದ ಕಳಸಗುರಿಯಲ್ಲಿ ಸರಕಾರಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಬಂಧಿಸಿದ್ದು, ಇದರಿಂದ ಬೈಕ್ ಸವಾರರು ಗಾಯಗೊಂಡಿದ್ದಾರೆ.
ಪುಂಚಮೆಯ ಸುನಿಲ್ ಫೆರ್ನಾಂಡಿಸ್ ಮತ್ತು ಅದ್ಯಪಾಡಿಯ ವಾಸು ಎಂಬವರು ಗಾಯಗೊಂಡ ಬೈಕ್ ಸವಾರರು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.