ಆರೋಪ ಸರಿಯಾಗಿದ್ದರೆ ನಾನೀಗ ಜೈಲಿನಲ್ಲಿರುತ್ತಿದ್ದೆ: ಕೇಜ್ರಿವಾಲ್

Update: 2017-05-22 11:03 GMT

ಹೊಸದಿಲ್ಲಿ,ಮೇ 22: ಆಮ್ ಆದ್ಮಿ ಪಾರ್ಟಿ ಮಾಜಿ ಸಚಿವ ಕಪಿಲ್ ಮಿಶ್ರಾರ ಆರೋಪಕ್ಕೆ ಕೇಜ್ರಿವಾಲ್ ಉತ್ತರ ನೀಡಿದ್ದಾರೆ. ಕಪಿಲ್ ಮಿಶ್ರಾ ಎತ್ತಿರುವ ಆರೋಪಗಳು ಆಧಾರರಹಿತವಾಗಿದೆ ಎಂದು ದಿಲ್ಲಿಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಪ್ರತಿಪಕ್ಷಗಳೂ ನಂಬದ ಆರೋಪಗಳನ್ನು ಕಪಿಲ್ ಎತ್ತಿದ್ದಾರೆ. ಇವುಗಳಲ್ಲಿ ಯಾವುದಾದರೊಂದು ಸರಿಯಾಗಿರುತ್ತಿದ್ದಲ್ಲಿ ನಾನೀಗ ಜೈಲಿನಲ್ಲಿರುತ್ತಿದ್ದೆ ಎಂದು ಕೇಜ್ರಿವಾಲ್ ಹೇಳಿದರು.

  ಆಮ್ ಆದ್ಮಿಪಾರ್ಟಿ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತಾಡುತ್ತಿದ್ದರು. ನಮ್ಮ ಕೆಲಸಗಳ ವಿರುದ್ಧ ಕೆಲವು ದಿವಸಗಳಿಂದ ದಾಳಿ ನಡೆಯುತ್ತಿದೆ. ಇದರಿಂದ ಯಾರೋ ನಮ್ಮ ಕೆಲಸಗಳಿಗೆ ಹೆದರುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತಿದೆ. ಆರೋಪದಲ್ಲಿ ಸ್ವಲ್ಪವೂ ಸತ್ಯಾಂಶ ಇರುತ್ತಿದ್ದರೆ ನಾನೀಗ ಜೈಲಿನೊಳಗಿರುತ್ತಿದ್ದೆ. ಇನ್ನು ನಾನು ನಿರಾಧಾರ ಆರೋಪಗಳಿಗೆ ಯಾವ ಉತ್ತರ ಕೊಡಲು ಸಾಧ್ಯ. ಈ ಆರೋಪಗಳನ್ನು ವಿರೋಧ ಪಕ್ಷಗಳು ಕೂಡಾ ನಂಬುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News