ನದಿಗೆ ಹಾರಿ ಆತ್ಮಹತ್ಯೆ

Update: 2017-05-22 16:25 GMT

ಮಂಗಳೂರು, ಮೇ 22: ಮಾನಸಿಕ ಖ್ನಿತೆಗೊಳಗಾದ ವಿವಾಹಿತನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಸೋಮವಾರ ಮರವೂರು ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ.

ಮೃತನನ್ನು ಮಾಲೆಮಾರ್ ನಿವಾಸಿ ಶ್ರೀಧರ (37) ಎಂದು ಗುರುತಿಸಲಾಗಿದೆ.

ವಿವಾಹಿತನಾಗಿ ಒಂದು ಮಗುವನ್ನು ಹೊಂದಿರುವ ಶ್ರೀಧರ ರವಿವಾರ ತೀವ್ರ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ರಾತ್ರಿಯೇ ಮನೆಯಿಂದ ಹೊರಟು ಮರವೂರು ಸೇತುವೆ ಬಳಿ ಬಂದು ಅಲ್ಲಿರುವ ನದಿಗೆ ಹಾರಿದ್ದರು ಎನ್ನಲಾಗಿದ್ದು, ಸೋಮವಾರ ಬೆಳಗ್ಗೆ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News