ರಾಜ್ಯ ಮಟ್ಟದಲ್ಲಿ ಪ್ರಥಮ

Update: 2017-05-22 18:21 GMT

ಪುತ್ತೂರು, ಮೇ 22: ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ವತಿಯಿಂದ ಕಾಸರಗೋಡಿನ ಚಟ್ಟಾಂಜಾಲ್‌ನಲ್ಲಿ ನಡೆದ ರಾಜ್ಯ ಮಟ್ಟದ 14ನೆ ಕಲಾ ಸಾಹಿತ್ಯ ಸ್ಪರ್ಧೆಯ ಮದ್ರಸಾ ಅಧ್ಯಾಪಕರ ವಿಭಾಗದ ಪ್ರಬಂಧ ಹಾಗೂ ಪಾಠ ಟಿಪ್ಪಣಿ ಸಿದ್ಧತಾ ಸ್ಪರ್ಧೆಯಲ್ಲಿ ಕುಂಬ್ರ ರೇಂಜ್ ಜಂಇಯತುಲ್ ಮುಅಲ್ಲಿಮೀನ್‌ನ ಪ್ರ. ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇವರು ಎಸ್ಕೆಜೆಂಸಿಸಿ ಕೇಂದ್ರ ಸಮಿತಿಯ ತರಬೇತುದಾರರಾಗಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News