​ಇಂದು ರಮಝಾನ್ ಸಿದ್ಧತೆ ತರಗತಿ

Update: 2017-05-22 18:27 GMT

ಮಂಗಳೂರು, ಮೇ 22: ಅಸ್ಸುಫ್ಫಟ್ರಸ್ಟ್ ಮತ್ತು ಇಸ್ಲಾಮಿಕ್ ದಅ್ವಾ ಸೆಂಟರ್ ಮಂಗಳೂರು ಇದರ ವತಿಯಿಂದ ಮೇ 23ರಂದು ಸಂಜೆ 7ಗಂಟೆಗೆ ಸರಿಯಾಗಿ ಕಂಕನಾಡಿ ಜಂ-ಇಯ್ಯತುಲ್ ಫಲಾಹ್ ಹಾಲ್‌ನಲ್ಲಿ ರಮಝಾನ್ ಸಿದ್ಧತೆ ತರಗತಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬಹು. ಇಸ್ಮಾಯೀಲ್ ಮುಸ್ಲಿಯಾರ್ ಕಂಕನಾಡಿ ದುಆಶೀರ್ವಚನ ನೀಡಲಿದ್ದು, ಸ್ವದಕತ್ತುಲ್ಲಾ ನದ್ವಿ ಉದ್ಘಾಟಿಸಲಿದ್ದಾರೆ.
 ಇಸ್ಲಾಮಿಕ್ ದಅ್ವಾ ಸೆಂಟರ್ ಇದರ ಚೆಯರ್‌ಮ್ಯಾನ್ ಬಿ.ಎಂ. ಮುಹಮ್ಮದ್ ರಶೀದ್ ಸಅದಿ ಅಧ್ಯಕ್ಷತೆ ವಹಿಸಲಿದ್ದಾರೆ. ಶೈಖುನಾ ಬೇಕಲ ಇಬ್ರಾಹೀಂ ಮುಸ್ಲಿಯಾರ್ ರಮಝಾನ್ ಪೂರ್ವಭಾವಿ ಸಿದ್ಧತೆ ಎಂಬ ವಿಷಯದಲ್ಲಿ ತರಬೇತಿ ನಡೆಸಲಿದ್ದಾರೆ ಎಂದು ಇಸ್ಲಾಮಿಕ್ ದಅ್ವಾ ಸೆಂಟರ್ ಸಂಚಾಲಕ ಕೆ.ಸಿ. ಎಣ್ಮೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News