×
Ad

ಗಾಂಜಾ ಸಾಗಾಟಕ್ಕೆ ಯತ್ನ: ಮೂವರು ಆರೋಪಿಗಳ ಬಂಧನ

Update: 2017-05-23 20:40 IST

ಬೆಳ್ತಂಗಡಿ, ಮೇ 23: ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ಗಾಂಜಾ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಮೂವರನ್ನು  ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.  

ಬಂಧಿತರನ್ನು  ತಮಿಳುನಾಡು ನಿವಾಸಿಗಳಾದ ಚಂದ್ರ ಕುಮಾರ್ ಯಾನೆ ಕುಮಾರ್, ಶಾಂತ ಕುಮಾರ್ ಮತ್ತು ತಮಿಳು ಸೆಲ್ವಿ ಯಾನೆ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 2 ಕೆಜಿ ಗಾಂಜಾ, 3 ಮೊಬೈಲ್ ಗಳು ಹಾಗೂ 1,100 ರೂ. ನಗದು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News