ಕೆ.ವಿ.ರಾಜೇಶ್ವರಿಗೆ ಅನುಪಮಾ ನಿರಂಜನ ಪ್ರಶಸ್ತಿ

Update: 2017-05-23 18:15 GMT

ಮಂಗಳೂರು, ಮೇ 23: ಕನ್ನಡ ಸಂಘರ್ಷ ಸಮಿತಿಯು ನೀಡುವ 2017ನೆ ಸಾಲಿನ ಡಾ.ಅನುಪಮಾ ನಿರಂಜನ ಪ್ರಶಸ್ತಿಗೆ ಹಿರಿಯ ಸಾಹಿತಿ, ಹೆಸರಾಂತ ಕಾದಂಬರಿಕಾರ್ತಿ, 114 ಕೃತಿಗಳನ್ನು ರಚಿಸಿರುವ ಡಾ.ಕೆ.ವಿ.ರಾಜೇಶ್ವರಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 5000 ರೂ. ನಗದನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮೇ 30ರಂದು ಸಂಜೆ 5:30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News