ಕಣಿವೆಗೆ ಬಿದ್ದ ಚಾರ್ ಧಾಮ್ ಯಾತ್ರಾರ್ಥಿಗಳ ಬಸ್: 21 ಮಂದಿ ಮೃತಪಟ್ಟಿರುವ ಶಂಕೆ

Update: 2017-05-23 18:25 GMT

ಡೆಹ್ರಾಡೂನ್, ಮೇ 23: ಇಂದೋರ್ ನಿಂದ ಚಾರ್ ಧಾಮ್ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಕಣಿವೆಗೆ ಬಿದ್ದ ಘಟನೆ ಉತ್ತರಖಂಡದ ಉತ್ತರಕಾಶಿಯ ಧರಾಸು ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ 21 ಮಂದಿ ಮೃತಪಟ್ಟಿರುವ ಸಾಧ್ಯತೆಯಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

“28 ಯಾತ್ರಾರ್ಥಿಗಳನ್ನು ಹೊತ್ತ ಬಸ್ ಇಂದೋರ್ ನಿಂದ ಬಂದಿದ್ದು, ಚಿನ್ಯಾಲಿಸೌರ್ ಮಾರ್ಗಮಧ್ಯೆ 250 ಮೀಟರ್ ಆಳದ ಕಮರಿಗೆ ಉರುಳಿದೆ. 7 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದ 21 ಮಂದಿ ಮೃತಪಟ್ಟಿರುವ ಸಾಧ್ಯತೆಗಳಿವೆ. ರಕ್ಷಣಾ ಕಾರ್ಯಕ್ಕೆ ಕತ್ತಲು ತೊಡಕಾಗಿದ್ದು, ರಕ್ಷಣಾ ತಂಡಕ್ಕೆ ಸ್ಥಳಕ್ಕೆ ಧಾವಿಸಿದ್ದರೂ ಕಣಿವೆಗೆ ಇಳಿಯಲಾಗುತ್ತಿಲ್ಲ” ಎಂದು ಎಡಿಜಿ ರಾಮ್ ಸಿಂಗ್ ಮೀನಾ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News